ಡೈಲಿ ವಾರ್ತೆ: 24 ಜುಲೈ 2023

ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆಯ ಕೋಟ ಘಟಕವತಿಯಿಂದ🌴ವನ-ಮಹೋತ್ಸವ🌳

ಕೋಟ:ಮೊಗವೀರ ಯುವ ಸಂಘಟನೆ [ರಿ.] ಉಡುಪಿ ಜಿಲ್ಲೆ ಕೋಟ ಘಟಕ ಮತ್ತು ಮಹಿಳಾ ಸಂಘಟನೆ ಮತ್ತು ಜಿ. ಶಂಕರ್ ಪ್ಯಾಮಿಲಿ ಟ್ರಸ್ಟ್‌ [ರಿ.] ಅಂಬಲಪಾಡಿ ಉಡುಪಿ,ಗೀತಾನಂದ ಫೌಂಡೇಶನ್ ಮಣೂರು ಪಡುಕರೆ, ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ, ಯುವಕ ಮಂಡಲ (ರಿ.) ಮಧುವನ ಅಚ್ಲಾಡಿ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) ಮಧುವನ ಅಚ್ಲಾಡಿ, ಸಹಭಾಗಿತ್ವದೊಂದಿಗೆ… ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ ಕುಂದರ್ ಅವರ 75’ನೇ ಜನ್ಮ ದಿನದ ಪ್ರಯುಕ್ತ ಆನಂದೋತ್ಸವದ ಅಂಗವಾಗಿ ಅವರು ಕೊಡಮಾಡಿದ ಗಿಡಗಳನ್ನು ಜು. 23 ರಂದು ಭಾನುವಾರ ಅಚ್ಲಾಡಿ-ಮಧುವನ ವಿವೇಕಾನಂದ‌ ಹಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿ ಗಿಡಗಳನ್ನು ನೆಡಲಾಯಿತು.

ಅಚ್ಲಾಡಿ-ಮಧುವನದ ಹಾಲು ಉತ್ಪಾದಕರ ಸಹಕಾರಿ ಸಂಘದ ಸರ್ವ ಸದಸ್ಯರಿಗೆ ಗಿಡಗಳನ್ನು ವಿತರಣೆ ಮಾಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಮೊಗವೀರ ಯುವ ಸಂಘಟನೆ [ರಿ‌.] ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ರಾಜೇಂದ್ರ ಸುವರ್ಣ ಹಿರಿಯಡಕ ಹಾಗೂ ಲಯನ್ಸ್ ಇಂಟರ್ನ್ಯಾಷನಲ್ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಮತ್ತು ಹಾಲು ಉತ್ಪಾದಕರ ಸಹಕಾರಿ ಸಂಘ ನಿ. ಮಧುವನ-ಅಚ್ಲಾಡಿ ಇದರ ಅಧ್ಯಕ್ಷರಾದ ಲಯನ್” ಸುರೇಂದ್ರ ಶೆಟ್ಟಿ ಹಾಲು ಉತ್ಪಾದಕ ಸಂಘದ ಸರ್ವ ಸದಸ್ಯರುಗಳಿಗೆ ಗಿಡಗಳ ವಿತರಣೆ ಮಾಡಿದರು. ಮೊಗವೀರ ಯುವ ಸಂಘಟನೆಯ ಜಿಲ್ಲಾ ನಿಕಟಪೂರ್ವ ಅಧ್ಯಕ್ಷರಾದ ಶಿವರಾಮ್ ಕೆ. ಎಮ್. ಪ್ರಧಾನ‌ ಕಾರ್ಯದರ್ಶಿ ರವೀಶ್ ಎಸ್. ಕೊರವಡಿ, ಕೋಟ ಘಟಕದ ಅಧ್ಯಕ್ಷರಾದ ರಂಜಿತ್ ಕುಮಾರ್ ಬಾರಿಕೆರೆ, ಉಪಾಧ್ಯಕ್ಷರಾದ ಲಕ್ಷ್ಮಣ್ ಕೋಟ, ಗೌರವ ಸಲಹೆಗರರಾದ ದೇವದಾಸ್ ಕಾಂಚನ್ ಕೋಟ, ಸಂಘಟನಾ ಕಾರ್ಯದರ್ಶಿ ಶಶಿ ಪಡುಕರೆ, ಬನ್ನಾಡಿ-ವಡ್ಡರ್ಸೆ ಲಯನ್ಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷರಾದ ಲಯನ್” ಸೋಮನಾಥ್ ಶೆಟ್ಟಿ ಬನ್ನಾಡಿ, ಕೋಶಾಧಿಕಾರಿ ಲಯನ್ ವಸಂತ್ ಶೆಟ್ಟಿ, ಸದಸ್ಯರಾದ ಲಯನ್ ಹರೀಶ್ ಶೆಟ್ಟಿ, ಯುವಕ ಮಂಡಲ [ರಿ.] ಮಧುವನ-ಅಚ್ಲಾಡಿ ಇದರ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿ ಕೊಮೆ, ಕ್ರೀಡಾ ಕಾರ್ಯದರ್ಶಿ ಅಶ್ವತ್ ಶೆಟ್ಟಿ, ಹಾಲು ಉತ್ಪಾದಕರ ಸಹಕಾರಿ ಸಂಘ ಮಧುವನ-ಅಚ್ಲಾಡಿ ಇದರ ನಿರ್ಧೇಶಕರಾದ ಗುಂಡು ಶೆಟ್ಟಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಂತೋಷ್ ಪೂಜಾರಿ, ಮಾಜಿ ಕಾರ್ಯದರ್ಶಿ ಮಂಜು ಮರಕಾಲ, ಸಹಾಯಕಿ ಶ್ರೀಮತಿ ಉಪಸ್ಥಿತರಿದ್ದರು. ಹಿರಿಯ ಸಹಾಯಕಿ ಶ್ರೀಮತಿ ಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.