ಡೈಲಿ ವಾರ್ತೆ:25 ಜುಲೈ 2023

ಮುಡಿಪು: ಬಸ್ ಗೆ ಕಾರು ಢಿಕ್ಕಿ: ಅಪಾಯದಿಂದ ಪಾರಾದ ಕಾರು ಚಾಲಕ

ಕೊಣಾಜೆ: ಬಸ್ಸು ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರು ಚಾಲಕ ಪವಾಡ ಸದೃಶ್ಯ ಪಾರಾದ ಘಟನೆ ಸೋಮವಾರ ರಾತ್ರಿ ಮುಡಿಪು ಜಂಕ್ಷನ್ ನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಗೆ ತೆರಳುತ್ತಿದ್ದ ಬಸ್ಸಿಗೆ ವಿಟ್ಲ ಕಡೆಯಿಂದ ಬಂದ ಝನ್ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯಲ್ಲಿ ಬಸ್ ನಡಿಗೆ ಸಿಲುಕಿ ಕಾರು ನಜ್ಜುಗುಜ್ಜಾಗಿದ್ದು, ಕಾರು ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.