ಡೈಲಿ ವಾರ್ತೆ: 30 ಜುಲೈ 2023

ಆಕಸ್ಮಿಕ ಬೆಂಕಿ: ಲಾರಿಯಲ್ಲಿದ್ದ ಪಾರ್ಸಲ್ ಬಾಕ್ಸ್ ಗಳು ಬೆಂಕಿಗೆ ಆಹುತಿ

ಹೊಸಪೇಟೆ: ಆಕಸ್ಮಿಕ ಬೆಂಕಿ‌ ತಗುಲಿ ಲಾರಿಯಲ್ಲಿದ್ದ ಪಾರ್ಸಲ್ ಬಾಕ್ಸ್ ಗಳು ಬೆಂಕಿಗೆ ಆಹುತಿಯಾದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಎಂ.ಬಿ ಅಯ್ಯನಹಳ್ಳಿ ಗ್ರಾಮದ ಬಳಿ ಜು.30ರ ಭಾನುವಾರ ನಡೆದಿದೆ.‌‌

ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಹೊಸಪೇಟೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ಪಾರ್ಸಲ್ ತುಂಬಿದ್ದ ಲಾರಿಯಲ್ಲಿ ಆಕಸ್ಮಿಕ ಬೆಂಕಿ‌ ಕಾಣಿಸಿದ್ದು, ಲಾರಿಯಲ್ಲಿ‌‌ ಸಂಗ್ರಹಿಸಿಡಲಾಗಿದ್ದ ಪಾರ್ಸಲ್ ಬಾಕ್ಸ್ ಗಳು ಸುಟ್ಟು ಭಸ್ಮವಾಗಿವೆ.

ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ‌ ಸಿಬ್ಬಂದಿ ಬೆಂಕಿ ನಂದಿಸಿ,‌ ಮುಂದಾಗಬಹುದಾದ ಅನಾಹುತ ತಪ್ಪಿಸಿದ್ದಾರೆ.
ಕಾನಾಹೊಸಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.