ಡೈಲಿ ವಾರ್ತೆ:31 ಆಗಸ್ಟ್ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ:ರಸ್ತೆಗೆ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ – ಓರ್ವ ಸಾವು

ಅಂಕೋಲಾ : ಇನೋವಾ ಕಾರ್‍ನ ಚಾಲಕನು ರಸ್ತೆಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಚಾಲನೆಯಲ್ಲಿ ನಿಯಂತ್ರಣ ತಪ್ಪಿ ಕಾರ್ ರಸ್ತಿಯಂಚಿನ ತಗ್ಗಿಗಿಳಿದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಓರ್ವನು ಗಂಭಿರಗಾಯಗೊಂಡು ಮೃತಪಟ್ಟ ಘಟನೆ ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಸರಳೇಬೈಲ್‍ನಲ್ಲಿ ಗುರುವಾರ ನಡೆದಿದೆ.

ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಇನೋವಾ ಕಾರ್‍ಗೆ ಅಡ್ಡಲಾಗಿ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಈ ಅವಘಡ ನಡೆದಿದ್ದು, ಕಾರ್‍ನಲ್ಲಿ ಪ್ರಯಾಣಸುತ್ತಿದ್ದ ಗಂಬೀರ ಗಾಯಗೊಂಡವರಲ್ಲಿ ಓರ್ವ ಹೈದ್ರಬಾದ ತೆಲಂಗನ ರಾಜ್ಯದ ತಿರುಮಲಗಿರಿಯ ನಿವಾಸಿ ಬಿ.ರೋಹಿತ ಯಾದವ ತಂದೆ ಬುದ್ದು ಜ್ಞಾನೇಶ್ವರ ಯಾದವ (32) ಮೃತಪಟ್ಟಿದ್ದಾರೆ.

ಹೈದ್ರಾಬಾದ ಆಂದ್ರಪ್ರದೇಶ ರಾಜ್ಯದ ಮುಡುಪು ನಿಶ್ಯಾಂತ ಆದಿತ್ಯಾ ತಂದೆ ಮುಡುಪು ಪ್ರದೀಪಕುಮಾರ, ಬಳ್ಳಾರಿ ಸಾಯಿ ಪ್ರಸಾದ ಮತ್ತು ಉಪೇಂದ್ರ ರಾಘವ ರೆಡ್ಡಿ ಇವರಿಗೆ ಚಿಕ್ಕಪುಟ್ಟ ಗಾಯವಾಗಿದೆ. ಇವರು ಗೋಕರ್ಣ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪಿಐ ಸಂತೋಷ ಶೆಟ್ಟಿ, ಹೆದ್ದಾರಿ ಗಸ್ತು ವಾಹನದ ಎಎಸ್‍ಐ ಚಂದ್ರಕಾಂತ ನಾಯ್ಕ ಭೇಟಿ ನೀಡಿದರು. ಪಿಐ ಅವರ ನಿರ್ದೆಶನದಲ್ಲಿ ಪಿಎಸ್‍ಐ ಸುನೀಲ ಹುಲ್ಲೊಳ್ಳಿ ಕಾರ್ ಚಾಲಕ ನಲಮ್ ಕೌಶಿಕ ತಂದೆ ತಂದೆ ಮೂರ್ತಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.