ಡೈಲಿ ವಾರ್ತೆ:31 ಆಗಸ್ಟ್ 2023

ಹೊನ್ನಾವರ:ಮೀನುಗಾರಿಕೆ ವೇಳೆ ದೋಣಿ ದುರಂತ – ಯುವಕನೋರ್ವ ಸಮುದ್ರಪಾಲು

ಹೊನ್ನಾವರ :ಮೀನುಗಾರಿಕೆ ವೇಳೆ ದೋಣಿ ಮುಳುಗಿ ಯುವಕನೋರ್ವ ಸಮುದ್ರಪಾಲದ ಘಟನೆ ಹೊನ್ನಾವರ ತಾಲೂಕಿನ ಕಾಸರಗೋಡಿನ ಶರಾವತಿ ನದಿ ಸೇರುವ ಸಂಗಮ ಪ್ರದೇಶದಲ್ಲಿ ನಡೆದಿದೆ.

ಸಮುದ್ರದಲ್ಲಿ ನಾಪತ್ತೆಯಾದ ಮೀನುಗಾರ ಪ್ರಜ್ವಲ್ ಮಾಬ್ಲ ಖಾರ್ವಿ(19) ಎಂದು ತಿಳಿದು ಬಂದಿದೆ.

ಕಾಸರಕೋಡನ ಇಬ್ಬರು
ಮೀನುಗಾರರು ದೋಣಿ ಮೂಲಕ ಮೀನುಗಾರಿಕೆ ತೆರಳಿದಾಗ ಆಕಸ್ಮಿಕವಾಗಿ ದೋಣಿ ಮುಳುಗಿದೆ. ಮೀನುಗಾರಿಕೆಗೆ ತೆರಳಿದ್ದ ಇಬ್ಬರು ಮೀನುಗಾರರ ಪೈಕಿ ಪ್ರಜ್ವಲ್ ಮಾಬ್ಲ ಖಾರ್ವಿ ನಾಪತ್ತೆಯಾಗಿದ್ದು ಇನೊರ್ವ ಮೀನುಗಾರರಾದ ರಾಜು ಶೇಷಗಿರಿ ತಾಂಡೇಲ್ ಅಪಾಯದಿಂದ ಪಾರಾಗಿದ್ದಾರೆ.

ನಾಪತ್ತೆಯಾದ ಯುವಕನ ಪತ್ತೆಗಾಗಿ ಅಗ್ನಿಶಾಮಕ ಪೊಲೀಸ್ ಸಿಬ್ಬಂದಿಗಳು ಮತ್ತು ಮೀನುಗಾರರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.