ಡೈಲಿ ವಾರ್ತೆ: 19/09/2023

ವರದಿ : ವಿದ್ಯಾಧರ ಮೊರಬಾ

ಬಾಳೆಗುಳಿ:ಸ್ಕೂಟಿ ಹಾಗೂ ಕಾರ್ ನಡುವೆ ಅಪಘಾತ – ಸ್ಕೂಟಿ ಸವಾರ ಸಾವು

ಅಂಕೋಲಾ : ಸ್ಕೂಟಿ ಮತ್ತು ಕಾರ್ ನಡುವೆ ಅಪಘಾತ ಸಂಭವಿಸಿ ಸವಾರ ಗಂಭೀರ ಗಾಯಗೊಂಡು, ಮೃತಪಟ್ಟ ಘಟನೆ ರಾ.ಹೆ.66ರ ಕಾಮತ್ ಉಪಚಾರ ಹೋಟೇಲ್ ಹತ್ತಿರ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕಾರವಾರ ತಾಲೂಕಿನ ಕಾಜುಬಾಗ ಗುರುಮಠದ ನಿವಾಸಿ, ಕೆನರಾ ಬ್ಯಾಂಕ್ ಕಾರವಾರ ಶಾಖೆಯಲ್ಲಿ ಪಿಗ್ಮಿ ಸಂಗ್ರಹಕರಾಗಿ ಕಾರ್ಯನಿರ್ವಹಿಸುತ್ತಿದ್ದ ಉದಯ ನಾರಾಯಣ ನಾಯ್ಕ (58) ಎಂಬಾತನೇ ಮೃತಪಟ್ಟ ಸವಾರ. ಈತನು ಕಾರವಾರದಿಂದ ಅಂಕೋಲಾ ಗಂಗಾವಳಿಯ ಸಂಬಂಧಿಕರ ಮನೆಯ ಗಣೇಶ ಹಬ್ಬದ ನಿಮಿತ್ತ ತನ್ನ ಮಗಳು ಅನುಪಾನೊಂದಿಗೆ ಹೋಂಡಾ ಡಿವೋ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು ಎನ್ನಲಾಗಿದೆ. ಬಾಳಿಗುಳೆ ಹತ್ತಿರ ಬಲ ದಿಕ್ಕಿನಲ್ಲಿರುವ ಪೆಟ್ರೋಲ್ ಬಂಕ್‍ಗೆ ಹೋಗಲು ಹೋಂಡಾಡಿವೋ ದ್ವಿಚಕ್ರ ವಾಹನವನ್ನು ಕ್ರಾಸ್ ಮಾಡುತ್ತಿದ್ದರು. ಇದೇ ವೇಳೆ ಹಿಂದಿನಿಂದ ಬಂದ ಕಾರ್ ಚಾಲಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸವಾರನ ತಲೆ ಭಾಗದ ರಕ್ತ ಸೋರುವಿಕೆಯಿಂದ ಅಸ್ವಸ್ಥಗೊಂಡಿದ್ದರು. ಹಟ್ಟಿಕೇರಿ ಟೋಲ್‍ಗೇಟ್‍ನ ಎನ್.ಎಚ್.ಎ.ಐ.ಅಂಬ್ಯುಲೆನ್ಸ್‍ನ ಸಿಬ್ಬಂದಿಗಳಾದ ಚಂದ್ರಹಾಸ ನಾಯ್ಕ, ಶ್ರೀಕಾಂತ ನಾಯ್ಕ, ನಾಗರಾಜ ಐಗಳ ಇವರು ಉದಯ ನಾಯ್ಕನನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ಒಳ ಪಡಿಸುತ್ತಿದ್ದಂತೆ ಕೆಲ ಕ್ಷಣದಲ್ಲಿ ಉದಯ ನಾಯ್ಕ ಮೃತಪಟ್ಟಿದ್ದಾರೆ.
ಅಪಘಾತ ಘಟನೆ ಕುರಿತು ದ್ವಿಚಕ್ರ ವಾಹದನ ಹಿಂಬಂದಿ ಸವಾರಿ ಅನುಪಾ ಉದಯ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಪಿಐ ಸಂತೋಷ ಶೆಟ್ಟಿ ಘಟನಾ ಸ್ಥಳವನ್ನು ಪರಿಶೀಲಿಸಿ, ಕಾರ್ ಮತ್ತು ಚಾಲಕ ಧಾರ ವಾಡ ಜಿಲ್ಲೆಯ ನವಲಗುಂದ ನಿವಾಸಿ ಪ್ರಶಾಂತ ವೀರಪ್ಪ ಮೆಣಸಿನಕಾಯಿ ಇವರನ್ನು ವಶಕ್ಕೆ ಪಡೆದು ಕಾನೂನುಕ್ರಮ ಕೈಗೊಂಡಿದ್ದಾರೆ.