ಡೈಲಿ ವಾರ್ತೆ:29 ಸೆಪ್ಟೆಂಬರ್ 2023

ತಣ್ಣೀರುಬಾವಿ ಗೌಸಿಯ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಮೀಲಾದುನ್ನಬಿ ಕಾರ್ಯಕ್ರಮ, ಉಪಮಹಾಪೌರರಿಗೆ ಸನ್ಮಾನ

ತಣ್ಣೀರುಬಾವಿ: ತಣ್ಣೀರುಬಾವಿ ಗೌಸಿಯ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಅಂತ್ಯ ಪ್ರವಾದಿ ಮಹಮ್ಮದ್ ಮುಸ್ತಾಪ(ಸ. ಅ.)ರ ಜನ್ಮ ದಿನಾಚರಣೆಯನ್ನು ಮಸೀದಿಯ ವಠಾರದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸೀದಿ ಅಧ್ಯಕ್ಷ ಪಿ.ಟಿ ಅಬ್ದುಲ್ ಖಾದರ್ ವಹಿಸಿದ್ದರು.
ಮದ್ರಸ ವಿಧ್ಯಾರ್ಥಿಗಳಿಂದ ಇಸ್ಲಾಮಿಕ್ ಕಲಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಅಲ್ಲದೆ ಈ ಸಂದರ್ಭದಲ್ಲಿ ಉಪಮಹಾಪೌರರಾದ ಸುನಿತಾ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ
ಗೌಸಿಯ ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರು ಬಶೀರ್ ಜೋಕಟ್ಟೆ, SK SSF ತಣ್ಣೀರಬಾವಿ ರಾಝಿಕ್, ಪ್ರಧಾನ ಕಾರ್ಯದರ್ಶಿ ನೌಫಾಲ್, SKSSF ನ ಪ್ರಧಾನಕಾರ್ಯದರ್ಶಿ ವಾಸಿಂ ಅಕ್ರಂ ಹಾಗೂ ಜಮಾತ್ ಬಾಂಧವರು ಉಪಸ್ಥಿತರಿದ್ದರು.