ಸುರಿಬೈಲು : ಸಿಡಿಲು ಬಡಿದು ಮನೆಗೆ ಹಾನಿ, ಛಾವಣಿ ಕುಸಿತ, ಲಕ್ಷಾಂತರ ರೂ ನಷ್ಟ.

ಡೈಲಿ ವಾರ್ತೆ: 11/OCT/2023

ಬಂಟ್ವಾಳ : ಬೋಳಂತೂರು ಗ್ರಾಮದ ಸುರಿಬೈಲ್ ಪಿಲಿಕೊಡಲು ನಿವಾಸಿ ಅಬ್ದುಲ್ ಖಾದರ್ ಅವರ ಮನೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದು ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಮಂಗಳವಾರ ರಾತ್ರಿ ಸುಮಾರು 9 ಗಂಟೆಯ ವೇಳೆ ಸಿಡಿಲು ಬಡಿದಿದ್ದು ಮನೆಯ ಮಾಡು ಕುಸಿದಿದೆ. ಹೆಂಚು ಪಕ್ಕಾಸು ರೀಪು ಸಹಿತ ಮನೆ ಮಾಡಿಗೆ ಪೂರ್ಣ ಪ್ರಮಾಣದ ಹಾನಿಯಾಗಿದ್ದು ಗೋಡೆ ಬಿರುಕು ಬಿಟ್ಟಿದೆ. ಇದೇ ವೇಳೆ ವಿದ್ಯುತ್ ಉಪಕರಣ ರೆಫ್ರಿಜರೇಟರ್, ಟಿವಿ , ವಾಷಿಂಗ್ ಮಷೀನ್, ಇನ್ವರ್ಟರ್ ಗಳು ಕೆಟ್ಟು ಹೋಗಿದ್ದು, ವಿದ್ಯುತ್ ಬೋರ್ಡ್ ಸಹಿತ ವೈರ್ ಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಸಿಡಿಲು ಬಡಿಯುವಾಗ ಮನೆಮಂದಿಯೆಲ್ಲಾ ಚಾವಡಿಯಲ್ಲಿದ್ದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸುಮಾರು ರೂ 2 ಲಕ್ಷಕ್ಕೂಅಧಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.