ಡೈಲಿ ವಾರ್ತೆ: 11/OCT/2023

ಪಾಣೆಮಂಗಳೂರು ಆಲಡ್ಕದ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ಲೋಕ ಪ್ರವಾದಿ ಅವರ ಜನ್ಮ ಮಾಸದ ಗೌರವಾರ್ಥವಾಗಿ ಮೌಲಿದ್ ಪಾರಾಯಣ

ಬಂಟ್ವಾಳ : ಪಾಣೆಮಂಗಳೂರು ಆಲಡ್ಕದ ಫ್ರೆಂಡ್ಸ್ ಅಸೋಸಿಯೇಶನ್ ವತಿಯಿಂದ ಲೋಕ ಪ್ರವಾದಿ ಅವರ ಜನ್ಮ ಮಾಸದ ಗೌರವಾರ್ಥವಾಗಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮೌಲಿದ್ ಪಾರಾಯಣ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ಆಲಡ್ಕದ ಸಂಸ್ಥೆಯ ಕಛೇರಿಯಲ್ಲಿ ನಡೆಯಿತು.

ಆಲಡ್ಕ ಎಂ.ಜೆ.ಎಂ ಮುದರ್ರಿಸ್ ಬಿ.ಎಚ್ ಅಬೂಸ್ವಾಲಿಹ್ ಮುಸ್ಲಿಯಾರ್ ಹಾಗೂ ಆಲಡ್ಕ ಬಿ‌.ಜೆ.ಎಂ ಮುದರ್ರಿಸ್ ಅಶ್ರಫ್ ಸಖಾಫಿ ಸವಣೂರು ಮೌಲೂದ್ ಕಾರ್ಯಕ್ರಮದ ನೇತ್ರತ್ವ ವಹಿಸಿದ್ದರು.

ಫ್ರೆಂಡ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಪಿ.ಮುಹಮ್ಮದ್, ಅಧ್ಯಕ್ಷ ಅಬ್ದುಲ್ ಮಜೀದ್ ಹಾಜಿ, ಉಪಾಧ್ಯಕ್ಷ ಮೋನಾಕ ಮೆಲ್ಕಾರ್, ಕಾರ್ಯದರ್ಶಿ ಇಸ್ಮಾಯಿಲ್ ಯು‌, ಕೋಶಾಧಿಕಾರಿ ಬಶೀರ್ ಬೋಗೋಡಿ, ಸ್ಥಳೀಯರಾದ ಅಬ್ದುಲ್ ಖಾದರ್ ಮದನಿ, ಅಬೂಬಕ್ಕರ್ ಮುಸ್ಲಿಯಾರ್ ಬೋಗೋಡಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.