ಡೈಲಿ ವಾರ್ತೆ: 21/OCT/2023

✍️. ಸುರೇಂದ್ರ ಕಾಂಚನ್ ಸಂಗಮ್

ಆನಗಳ್ಳಿ: ಚೆಸ್ ಪಂದ್ಯಾಟ ಹಾಗೂ ಕರಾಟೆ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ

ಕುಂದಾಪುರ: ಆನಗಳ್ಳಿ ದತ್ತಾಶ್ರಮ ಹಾಗೂ ಆದಿಶಕ್ತಿ ಮಠದಲ್ಲಿ ರಾಷ್ಟ್ರ ಮಟ್ಟದಲ್ಲಿ ಚೆಸ್ ಪಂದ್ಯಾಟದಲ್ಲಿ ಕು. ವರ್ಣಿತಾ. ವಿ. ಕುಂದರ್ ಹಾಗೂ ಕರಾಟೆ ಸ್ಪರ್ಧೆಯಲ್ಲಿ ಕು. ಶಿಖಾ ಬಿಜೂರು ಇವರನ್ನ ದತ್ತಾಶ್ರಮದ ಪ್ರವರ್ತಕರಾದ ಶ್ರೀಮತಿ ಫೆರ್ಮಿನಾ ಸುಭಾಸ್ ಪೂಜಾರಿಯವರು ಅತ್ಯಂತ ಗೌರವದಿಂದ ಆಯ್ಕೆಯಾದ ವಿದ್ಯಾರ್ಥಿಗಳನ್ನ ಸನ್ಮಾನಿಸಿದರು.

ಆಯ್ಕೆಯಾದ ಈ ವಿದ್ಯಾರ್ಥಿ ರಾಷ್ಟ್ರಮಟ್ಟದಲ್ಲೂ ಉತ್ತಮವಾಗಿ ಆಟವಾಡಿ. ನಮ್ಮ ಕುಂದಾಪುರದ ಕೀರ್ತಿಪತಾಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಗಮ್ ಫ್ರೆಂಡ್ಸ್ ನ ಸದಸ್ಯರು ಮತ್ತು ಗೆಳೆಯರ ಬಳಗ ಆನಗಳ್ಳಿ ಇದರ ಸದಸ್ಯರು, ಸಂಘಟನೆಯ ಪ್ರಮುಖರು, ಹಾಗೂ ಭಕ್ತ ಸಮೂಹದವರು ಉಪಸ್ಥಿತರಿದ್ದರು.