ಡೈಲಿ ವಾರ್ತೆ: 22/OCT/2023

ಕೋಟ : ಆಕಸ್ಮಿಕ ಕಾಲು ಜಾರಿ ಹೊಳೆಗೆ ಬಿದ್ದು ಯುವಕ ಮೃತ್ಯು!

ಕೋಟ: ಬೇಳೂರು ಕೋಣಬಗೆ ರೈಲ್ವೆ ಹಳಿ ಸಮೀಪ ಐರುಗುಂಡೆ ಬಳಿಯ ಹಿರೇ ಹೊಳೆಯಲ್ಲಿ ಕೈ ತೊಳೆಯಲು ಹೋದ ಯುವಕನೊಬ್ಬ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.

ಸ್ನೇಹಿತರೊಂದಿಗೆ ತೋಟದಲ್ಲಿ ಕೆಲಸ ಮಾಡಿ ಕೈ ಕಾಲು ತೊಳೆಯಲೆಂದು ಹೊಳೆಗೆ ಹೋದ ಸಂದರ್ಭ ಕಾಲು ಜಾರಿ ಬಿದ್ದು ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೃತಪಟ್ಟ ದುರ್ದೈವಿ ಉಗ್ರಾಣಿ ಬೆಟ್ಟು ಪ್ರಶಾಂತ್ ಆಚಾರ್ಯ (22) ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಕೊಡಲೇ ಈಶ್ವರ ಮಲ್ಪೆ ಹಾಗೂ ಸ್ಥಳೀಯ ಜೀವನ್ ಮಿತ್ರ ಕೋಟ ನಾಗರಾಜ್ ಪುತ್ರನ್ ಇವರ ಕಾರ್ಯಚರಣೆಯಿಂದ ಯುವಕನ ಮೃತದೇಹವನ್ನು ಹೊರ ತೆಗೆಯಲಾಗಿದ್ದು ಈ ಕುರಿತು ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.