ಡೈಲಿ ವಾರ್ತೆ: 30/OCT/2023

ವರದಿ: ವಿದ್ಯಾಧರ ಮೊರಬಾ

ಬೆಳ್ಳಂಬೆಳಿಗ್ಗೆ ಕಮರ್ಷಿಯಲ್ ಟ್ಯಾಕ್ಸ್ ಸಹಾಯ ಆಯುಕ್ತ ರಾಜೇಶ್ ನಾಯಕ್ ಬೇಲಿಕೇರಿ ಮನೆಗೆ ಲೋಕಾಯುಕ್ತ ದಾಳಿ – ಅಂಕೋಲಾ ಮತ್ತು ಕುಂದಾಪುರದ ಮನೆ ಹಾಗೂ ಉಡುಪಿ ಕಚೇರಿಯಲ್ಲಿ ತಪಾಸಣೆ

ಅಂಕೋಲಾ : ಹೊರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ತಾಲೂಕಿನ ಬೇಲೆಕೇರಿಯ ಮನೆಯ ಮೇಲೆ ದಾಳಿ ನಡೆಸಿದ ಘಟನೆ ಸೋಮವಾರ ನಸುಕಿನ ವೇಳೆ ನಡೆದಿದೆ.

ರಾಜೇಶ ಹಮ್ಮಣ್ಣ ನಾಯಕ ಇವರು ಮೂಲತಃ ಅಂಕೋಲಾದ ಬೇಲೆಕೇರಿಯವರಾಗಿದ್ದು, ಪ್ರಸ್ತುತ ಉಡುಪಿಯ ವಾಣಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರ ಮೇಲೆ ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಆರೋಪಿ ಇರುವ ಹಿನ್ನೆಲೆಯಲ್ಲಿ ಕುಂದಾಪುರದ ಸಲೀಂ ಅಲಿ ರಸ್ತೆಗೆ ಹೊಂದಕೊಂಡ ಸ್ವಂತ ಮನೆ ಮತ್ತು ತಾಲೂಕಿನ ಬೇಲೆಕೇರಿಯ ಮೂಲ ಮನೆ ಯಲ್ಲಿ ಸೋಮವಾರ ನಸುಕಿನ ವೇಳೆಯಲ್ಲಿ ಮಂಗಳೂರು ಲೋಕಾಯುಕ್ತ ನಿರೀಕ್ಷಕ ಸುರೇಶಕುಮಾರ ಬಿ. ನೇತೃತ್ವದಲ್ಲಿ ದಾಳಿ ನಡೆಸಿದರು.
ರಾಜೇಶ ನಾಯಕ ಅವರ ತಂದೆ-ತಾಯಿ ಮಾತ್ರ ಮನೆಯಲ್ಲಿದ್ದು, ಅವರಿಂದ ಮಾಹಿತಿ ಜತೆ ದಾಖಲಾತೆ ಪತ್ರಗಳನ್ನು ಪರಿಶೀಲಿಸಿ, ಮತ್ತು ಮನೆ ತೆರಿಗೆ ಕುರಿತು ಗ್ರಾಮ ಪಂಚಾಯತನಲ್ಲಿ ಮಾಹಿತಿ ಪಡೆದುಕೊಂಡಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಿಬ್ಬಂದಿ ತಂಡದವರು ಹಾಜರಿದ್ದರು.