ಡೈಲಿ ವಾರ್ತೆ: 07/JAN/2024

ದಕ್ಷಿಣ ಕನ್ನಡ: ಎಚ್.ಪಿ.ಸಿ.ಲ್ ಟ್ಯಾಂಕರ್ ಕಂಡಕ್ಟರ್ ಗಳ ಮುಷ್ಕರ

ಸುರತ್ಕಲ್: ಸುರತ್ಕಲ್ ಇಲ್ಲಿನ HPCL ನಲ್ಲಿ ಸುಮಾರು 25 ವರ್ಷಗಳಿಂದ ಬುಲೇಟ್ ಟ್ಯಾಂಕರ್ ಗ್ಯಾಸ್ ಫಿಲ್ಲಿಂಗ್ ಮಾಡಲು ಕ್ಲೀನರ್ ಗಳ ಮೂಲಕವೇ ಒಳಗೆ ಪ್ರವೇಶಿಸಲು ಅನುಮತಿ ಇರುವುದರಿಂದ ಇಲ್ಲಿನ ಟ್ಯಾಂಕರ್ ಚಾಲಕರಿಗೆ ಅವರ ಗಾಡಿ ಲೊಕೇಷನ್ ಸೀರಿಯಲ್ ಬರಲು ಎರಡು ಮೂರು ದಿನ ತಗಲುವ ಸಲುವಾಗಿ ಪರ್ಮನೆಂಟ್ ಕ್ಲೀನರ್ ನೇಮಿಸಲು ಅವರಿಗೆ ಹೊರೆಯಾಗುತ್ತಿದೆ. ಆದ್ದರಿಂದ ಅವರು ಇಲ್ಲಿಯ ಸ್ಥಳೀಯ ನಿವಾಸಿಗಳನ್ನು ಕ್ಲೀನರಾಗಿ ಅವಲಂಬಿಸಿರುತ್ತಾರೆ.
ಇದರಿಂದಾಗಿ ಇಲ್ಲಿನ ಸುಮಾರು ಎಂಟು ನೂರು ಅಧಿಕ ಸ್ಥಳೀಯ ಯುವಕರು ಸಹ ಸುಮಾರು 25 ವರ್ಷಗಳಿಂದ ದುಡಿಮೆ ರೂಪದಲ್ಲಿ ಇದನ್ನೇ ಅವಲಂಬಿಸಿದ್ದಾರೆ.ಈಗ ಒಂದು ವಾರದಿಂದ ಇದ್ದಕ್ಕಿದ್ದಂತೆ ಇಲ್ಲಿನ ಟ್ಯಾಂಕರ್ ಮಾಲಕರು without cleaner ಗೆ ಪರ್ಮಿಷನ್ ಗೆ ಪೆಟ್ಟು ಹಿಡಿದ್ದರಿಂದ HCPL ಅಧಿಕಾರಿಗಳು ಇವರ ಬೇಡಿಕೆಗೆ ಕ್ಯಾರೇ ಮಾಡಲಿಲ್ಲ. ಒಂದು ವಾರಗಳ ಟ್ಯಾಂಕರ್ ಲೋಡಿಂಗ್ ಆಗದೆ ನಿಂತಿದೆ.


ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕ ಭರತ್ ಶೆಟ್ಟಿ ಹಾಗೂ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಸುಮಾರ್ ಎಂಟು ನೂರು ಅಧಿಕ ಸ್ಥಳೀಯ ನಿವಾಸಿಗಳ ಕೆಲಸಕ್ಕೆ ಕುತ್ತು ಬಂದ ವಿಷಯವನ್ನು ಅರಿತ ಶಾಸಕ ಭರತ್ ಶೆಟ್ಟಿ ಹಾಗೂ ಕಾರ್ಪೊರೇಟರ್ ಲೋಕೇಶ್ ಬೊಳ್ಳಾಜೆ ಹಾಗೂ ವಿ.ಜಿ. ಗುರುಚಂದ್ರ ಹೆಗ್ಗಡೆಯವರು ತುರ್ತಾಗಿ ಸ್ಥಳೀಯ ಕಾರ್ಮಿಕರನ್ನು ಭೇಟಿಯಾಗಿ ಇಲ್ಲಿನ ಕಾರ್ಮಿಕರ ಅಹವಾಲು ಸ್ವೀಕರಿಸಿದ ಬಳಿಕ ಮಾತನಾಡಿ ಜಿಲ್ಲಾಧಿಕಾರಿಯ ನಡೆಯ ಬಗ್ಗೆ ಆಕ್ರೋಶಗೊಂಡು ಇಲ್ಲಿನ ಕ್ಲೀನರ್ ಗಳ ಪರವಾಗಿ HPCL ಅಧಿಕಾರಿಗಳೊಂದಿಗೆ ರಾತ್ರಿ ಒಂದು ಗಂಟೆಯವರೆಗೆ back to back ಸಭೆ ನಡೆಸಿದರು.

ತದನಂತರ ಮಾತನಾಡಿದ ಶಾಸಕ ಭರತ್ ಶೆಟ್ಟಿ ನಮ್ಮ ಭೂಮಿ ಕಿತ್ತುಕೊಂಡು ನಮಗೆ ಉದ್ಯೋಗ ಕೊಟ್ಟು ಅದನ್ನು ಏಕಾಏಕಿ ಹಿಂಪಡೆದ ಅಧಿಕಾರಿಗಳ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇಲ್ಲಿನ ನಿವಾಸಿಗಳಿಗೆ ಜೀವ ಕೊಟ್ಟಾದರು ನ್ಯಾಯ ಒದಗಿಸುವ ಭರವಸೆ ನೀಡಿದರು. ಅದೇ ರೀತಿ ನಾವು MP ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದೆವು ಅವರು ಕೂಡ ಅಶ್ವಾಸನೆ ನೀಡಿದರು.