



ಡೈಲಿ ವಾರ್ತೆ: 19/Jan/2024


ಕಪಿಲಾ ನದಿಯಲ್ಲಿ ಕೊಚ್ಚಿ ಹೋದ ಮೂವರು ಅಯ್ಯಪ್ಪ ಮಾಲಾಧಾರಿಗಳು
ಮೈಸೂರು: ಅಯ್ಯಪ್ಪ ಮಾಲಾಧಾರಿಗಳು ನೀರು ಪಾಲಾದ ಘಟನೆ ನಂಜನಗೂಡಿನ ನದಿಯಲ್ಲಿ ನಡೆದಿದ್ದು, ಮೂವರು ಮೃತಪಟ್ಟಿದ್ದಾರೆ.
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಎಂಟು ಮಾಲಾಧಾರಿಗಳು ನಂಜನಗೂಡಿನ ಕಪಿಲಾ ನದಿಯಲ್ಲಿ ನೀರಿಗಿಳಿದಿದ್ದರು. ಅವರಲ್ಲಿ ಗವಿರಂಗ, ರಾಕೇಶ್ (19), ಅಪ್ಪು (16) ಮೃತಪಟ್ಟಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಯು ಗವಿರಂಗನನ್ನು ಮೇಲಕ್ಕೆತ್ತಿದೆ. ಆದರೆ ಆತನೂ ಮೃತಪಟ್ಟಿದ್ದಾನೆ. ಅಪ್ಪು ಎಂಬಾತನ ಮೃತದೇಹವನ್ನು ಸಿಬ್ಬಂದಿಗಳು ಹೊರತೆಗೆದಿದ್ದಾರೆ.
ಕಳೆದ ಮೂರು ದಿನಗಳ ಹಿಂದೆ ಶಬರಿ ಮಲೆಗೆ ತೆರಳಿದ್ದ 8 ಜನ ಮಾಲಾಧಾರಿಗಳು, ಅಯ್ಯಪ್ಪನ ದರ್ಶನ ಮುಗಿಸಿಕೊಂಡು ನಂಜನಗೂಡಿಗೆ ಬಂದಿದ್ದರು. ನಂಜನಗೂಡಿನಲ್ಲೆ ಮಾಲೆ ತೆಗೆಯಲು ಬಂದಿದ್ದ ಬಂದಿದ್ದರು. ಈ ವೇಳೆ ಈ ಅನಾಹುತ ನಡೆದಿದೆ.