ಡೈಲಿ ವಾರ್ತೆ: 10/Mar/2024

ಅಧಿವಕ್ತಾ ಪರಿಷತ್ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ನ್ಯಾಯವಾದಿ ಎ. ಸಂತೋಷ್ ಹೆಬ್ಬಾ‌ರ್, ಪ್ರಧಾನಕಾರ್ಯದರ್ಶಿ ಆರೊರು ಸುಕೇಶ್ ಶೆಟ್ಟಿ ಆಯ್ಕೆ

ಉಡುಪಿ: ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಬೈಠಕ್ ಉಡುಪಿಯಲ್ಲಿ ಆರ್.ಎಸ್.ಎಸ್. ಕಚೇರಿಯಲ್ಲಿ ಮಾ.3 ರಂದು ನಡೆಯಿತು.

ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ನ್ಯಾಯವಾದಿ ಎ. ಸಂತೋಷ್ ಹೆಬ್ಬಾರ್, ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಆರೂರು ಸುಕೇಶ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಯಾಮಗಳ ಪ್ರಮುಖರಾದ ಪ್ರಶಾಂತ್ ಪವರ್ ರವರು ರಾಷ್ಟ್ರೀಯ ಉಪಾಧ್ಯಕ್ಷ ರಾಜೇಂದ್ರನ್, ಮಧ್ಯ ಕ್ಷೇತ್ರೀಯ ಸೈಯೋಜಕರಾದ ಲಕ್ಷ್ಮಿ ನಾರಾಯಣ ಹೆಗ್ಡೆ, ರಾಜ್ಯ ಕಾರ್ಯಾಧ್ಯಕ್ಷರಾದ ಗುರುಪ್ರಸಾದ್ ಶೆಟ್ಟಿ, ಪ್ರಾಂತ ಕಾರ್ಯದರ್ಶಿಯಾದ ಜಗದೀಶ್ ಕೆ.ಆ‌ರ್ ಇವರ ಉಪಸ್ಥಿತಿಯಲ್ಲಿ ಘೋಷಣೆ ಮಾಡಿರುತ್ತಾರೆ.