ಡೈಲಿ ವಾರ್ತೆ: 24/Mar/2024

ದೇವಸ್ಥಾನದ ಉತ್ಸವ ಸಂದರ್ಭ
ಆನೆಗಳ ಕಾದಾಟ – ಹಲವು ಮಂದಿಗೆ ಗಾಯ (ವಿಡಿಯೋ ವೈರಲ್)

ದೇವಸ್ಥಾನವೊಂದರ ಉತ್ಸವದಲ್ಲಿ ಮೆರವಣಿಗೆ ಸಂದರ್ಭದಲ್ಲಿ ದೇವರನ್ನು ಹೊತ್ತ ಆನೆಯೊಂದು ಇನ್ನೊಂದು ಆನೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಘಟನೆಯೊಂದು ನಡೆದಿದೆ. ಈ ಘಟನೆ ಶುಕ್ರವಾರ ನಡೆದಿದೆ.

ವಿಡಿಯೋ ವೈರಲ್

ತ್ರಿಶೂರ್‌ನ ತರಕ್ಕಲ್‌ ದೇವಸ್ಥಾನದ ಉತ್ಸವದ ಸಮಯದಲ್ಲಿ ಈ ಘಟನೆ ನಡೆದಿದೆ. ʼಅಮ್ಮತಿರುವಾಡಿʼ ದೇವರ ಮೆರವಣಿಗೆಯಲ್ಲಿ ಗುರುವಾಯೂರ್‌ ರವಿಕೃಷ್ಣನ್‌ ಎಂಬ ಆನೆ ಇನ್ನೊಂದು ಆನೆ ಪುತ್ತುಪ್ಪಲ್ಲಿ ಅರ್ಜುನನ್‌ ನಡುವೆ ಕಾದಾಟ ನಡೆದಿದೆ.

ಈ ದಾಳಿ ಸಂದರ್ಭದಲ್ಲಿ ಮಾವುತನಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಅವರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ. ಆನೆಗಳ ಕಾದಾಟದ ಸಂದರ್ಭ ಅಲ್ಲಿ ನೆರೆದಿದ್ದ ಜನರು ಭಯದಿಂದ ಓಡಿದ್ದು, ಓಡುವ ಭರದಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಅನಂತರ ಆನೆಗಳನ್ನು ಶಾಂತಗೊಳಿಸಲು ಒಂದು ಗಂಟೆಗಳ ಕಾಲ ಬೇಕಾಯಿತು ಎಂದು ಹೇಳಲಾಗಿದೆ.