ಡೈಲಿ ವಾರ್ತೆ: 27/Mar/2024

ಶಾಲೆಗೆ ಕುಡಿದು ಬಂದ ಶಿಕ್ಷಕ: ಚಪ್ಪಲಿ ಎಸೆದು ಓಡಿಸಿದ ವಿದ್ಯಾರ್ಥಿಗಳು (ವಿಡಿಯೋ ವೈರಲ್ )

ವಿಡಿಯೋ ವೀಕ್ಷಿಸಿ

ರಾಯಪುರ:ಶಾಲೆಗೆ ಕುಡಿದು ಬಂದ ಶಿಕ್ಷಕನನ್ನು ವಿದ್ಯಾರ್ಥಿಗಳು ಚಪ್ಪಲಿ ಎಸೆದು ಓಡಿಸಿದ ಘಟನೆ ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ.

ಬಸ್ತಾರ್ ಜಿಲ್ಲೆಯ ಪಿಲಿಭಟ್ಟ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಪ್ರತಿದಿನ ಕುಡಿದು ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಪಾಠ ಮಾಡುವ ಬದಲು ನೆಲದ ಮೇಲೆ ಮಲಗುತ್ತಿದ್ದನು. ಮಕ್ಕಳಿಗೆ ಕಲಿಸಿಕೊಡಿ ಎಂದು ಕೇಳಿದಾಗ ದೌರ್ಜನ್ಯ ನಡೆಸುತ್ತಾನೆ. ಕಳೆದ ವಾರ ಮತ್ತೆ ಕುಡಿದು ಶಾಲೆಗೆ ಬಂದ ಶಿಕ್ಷಕರೊಬ್ಬರು ಮಕ್ಕಳಿಗೆ ಪಾಠ ಹೇಳಿಕೊಡಿ ಎಂದು ಕೇಳಿದಾಗ ಅವರ ಮೇಲೆ ಕೋಪಗೊಂಡಿದ್ದರು.

ಇದರಿಂದ ಕುಪಿತಗೊಂಡ ಮಕ್ಕಳು ಶಿಕ್ಷಕರ ಮೇಲೆ ಶೂ. ಚಪ್ಪಲು ಎಸೆದಿದ್ದಾರೆ. ಕೂಡಲೇ ಶಿಕ್ಷಕರು ಬೈಕ್ ತೆಗೆದುಕೊಂಡು ಸ್ಥಳದಿಂದ ತೆರಳಿದರು. ವೀಡಿಯೋದಲ್ಲಿ ಬೈಕ್‌ ಚಲಾಯಿಸುತ್ತಿದ್ದ ಶಿಕ್ಷಕನ ಹಿಂದೆ ಮಕ್ಕಳು ಓಡುವುದು ಮತ್ತು ಚಪ್ಪಲುಗಳನ್ನು ಎಸೆಯುವುದನ್ನು ಕಾಣಬಹುದು.