ಡೈಲಿ ವಾರ್ತೆ: 13/April/2024

ಚುನಾವಣ ಪ್ರಚಾರದ ವೇಳೆ
ಆಂಧ್ರ ಸಿಎಂ ಜಗನ್ ಮೇಲೆ ಕಲ್ಲು ತೂರಾಟ..!

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡದಲ್ಲಿ ಚುನಾವಣ ಪ್ರಚಾರದ ವೇಳೆ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಕಲ್ಲು ತೂರಾಟ ನಡೆದಿದೆ.

ವಿಡಿಯೋ ಮತ್ತು ಫೋಟೋಗಳಲ್ಲಿ ಕಂಡು ಬಂದಿರುವಂತೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸೇರಿರುವ ವೇಳೆ ಜಗನ್ ಅವರ ಹಣೆಗೆ ಕಲ್ಲು ತಗುಲಿದ್ದು ರಕ್ತ ಬಂದಿದೆ. ತತ್ ಕ್ಷಣ ಅವರನ್ನು ಪ್ರಚಾರ ಬಸ್ ನೊಳಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬೃಹತ್ ಹೂ ಹಾರ ಹಾಕಿದ ವೇಳೆ ಸಮಯ ಸಾಧಿಸಿ ಕಲ್ಲು ತೂರಲಾಗಿದೆ ಎಂದು ವರದಿಯಾಗಿದೆ.

ಪೊಲೀಸರು ಕಾರ್ಯಪ್ರವೃತ್ತರಾಗಿದ್ದು ದುಷ್ಕರ್ಮಿಗಳಿಗಾಗಿ ವ್ಯಾಪಕ ಶೋಧ ನಡೆಸುತ್ತಿದ್ದಾರೆ.