ಡೈಲಿ ವಾರ್ತೆ: 16/April/2024

ಪಾಣೆಮಂಗಳೂರು: ಬೋಳಂಗಡಿ ನಿವಾಸಿ ಎಂ.ಹೆಚ್ ಶಾಹುಲ್ ಹಮೀದ್ (87) ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಬಂಟ್ವಾಳ ; ಪಾಣೆಮಂಗಳೂರು ಸಮೀಪದ  ಬೋಳಂಗಡಿ ನಿವಾಸಿ ಎಂ.ಹೆಚ್ ಶಾಹುಲ್ ಹಮೀದ್ (87) ಅವರು  ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ಸ್ವಗ್ರಹದಲ್ಲಿ ನಿಧನರಾದರು.

     ಸ್ಥಳೀಯವಾಗಿ ಸಾವುಞಾಕ ಎಂದೇ ಚಿರಪರಿಚಿತರಾಗಿದ್ದ ಮೃತರು ಜಿನಸು ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಜಮಾಅತೆ ಇಸ್ಲಾಮಿ ಕಾರ್ಯಕರ್ತರಾಗಿ ಜನಾನುರಾಗಿಯಾಗಿದ್ದರು.

ಮೃತರು ಪತ್ನಿ, ಸಾಮಾಜಿಕ ಕಾರ್ಯಕರ್ತ ಮುಸ್ತಫಾ ಎಂ.ಎಚ್. ಸಹಿತ ಇಬ್ಬರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಮಿತ್ರಾದಿಗಳನ್ನು ಅಗಲಿದ್ದಾರೆ.

*ಗಣ್ಯರ ಸಂತಾಪ*
ಯಹ್ಯಾ ತಂಙಳ್, ಮಾಜಿ ಸಚಿವ ಬಿ.ರಮಾನಾಥ ರೈ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ತೌಫೀಕ್ ರಫೀಕ್ ಹಾಜಿ, ಚೆಂಡಾಡಿ ಅಬ್ದುಲ್ಲಾ ಹಾಜಿ, ಚೆಂಡಾಡಿ ಇಬ್ರಾಹಿಂ ಹಾಜಿ ಮೃತರ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.