ಡೈಲಿ ವಾರ್ತೆ: 18/April/2024

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಂದ ಬಿರುಸಿನ ಪ್ರಚಾರ

ಬಂಟ್ವಾಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ವಿವಿಧೆಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಗುರುವಾರ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು.

   

ಬಡಗ ಬೆಳ್ಳೂರು, ಅಮ್ಮುಂಜೆ – ಬಡಕಬೈಲು ಜಂಕ್ಷನ್, ಕಳ್ಳಿಗೆ – ಬ್ರಹ್ಮರಕೊಟ್ಲು, ಶೇಡಿಗುರಿ -ಬಾಳ್ತಿಲ,  ಮಾಣಿ – ಸೂರಿಕುಮೇರು, ಪೆರಾಜೆ – ಬುಡೋಳಿ,  ಕಡೇಶ್ವಾಲ್ಯ – ಪೆರ್ಲಾಪು, ನೆಟ್ಲಮುಡ್ನೂರು – ನೇರಳಕಟ್ಟೆ, ಅನಂತಾಡಿ – ಗೋಳಿಕಟ್ಟೆ, ವೀರಕಂಭ -ಮಂಗಿಲಪದವು, ಗೋಳ್ತಮಜಲು – ಕಲ್ಲಡ್ಕ, ಅಮ್ಟೂರು, ಸಜಿಪ ಮೂಡ – ಬೊಳ್ಳಾಯಿ, ಕನ್ಯಾನ – ಮಿತನಡ್ಕ, ವಿಟ್ಲ ಪಡ್ನೂರು – ಕೊಡುಂಗಾಯಿ, ಕೊಳ್ನಾಡು – ಸಾಲೆತ್ತೂರು, ಬೋಳಂತೂರು, ಮಂಚಿ – ಕುಕ್ಕಾಜೆ ಜಂಕ್ಷನ್, ಸಜೀಪ ಮುನ್ನೂರು – ನಂದಾವರ ಜಂಕ್ಷನ್, ಪಾಣೆಮಂಗಳೂರು – ಮೆಲ್ಕಾರ್ ಜಂಕ್ಷನ್ ನಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಸಿದರು.

ಧಾರ್ಮಿಕ ಕೇಂದ್ರಗಳಿಗೆ ಭೇಟಿ:

ಬೆಳಿಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಮುಂದಾದ ಪದ್ಮರಾಜ್ ಆರ್. ಪೂಜಾರಿ ಅವರು, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮೊಡಂಕಾಪು ಚರ್ಚ್, ನರಿಕೊಂಬು ಹನುಮಾನ್ ಮಂದಿರ, ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

  

ಮಾಜಿ ಸಚಿವ, ಜಿಲ್ಲಾ ಚುನಾವಣಾ ಉಸ್ತುವಾರಿ ಬಿ.ರಮಾನಾಥ ರೈ, ಜಿಲ್ಲಾ ಕಾಂಗ್ರೆಸ್  ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಚಂದ್ರಪ್ರಕಾಶ್ ಶೆಟ್ಟಿ, ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ್ ಕೋಟ್ಯಾನ್, ಕೆಪಿಸಿಸಿ ಸಂಯೋಜಕ ಅಶ್ವನಿ ಕುಮಾರ್ ರೈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪಕ್ಷ ಪ್ರಮುಖರಾದ ಸುದರ್ಶನ್ ಜೈನ್, ಸಂಜೀವ ಪೂಜಾರಿ,   ಜಯಂತಿ ಪೂಜಾರಿ,  ಸುರಯ್ಯ ಅಂಜುಮ್, ಬಿ.ಎಂ ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಮಾಯಿಲಪ್ಪ ಸಾಲ್ಯಾನ್, ಕೆ. ಪದ್ಮನಾಭ ರೈ, ಇಬ್ರಾಹಿಂ ನವಾಝ್ ಬಡಕಬೈಲು, ಸುರೇಶ್ ಜೋರಾ, ಶೋಭಿತ್ ಪೂಂಜಾ, ರಝಾಕ್ ಕುಕ್ಕಾಜೆ, ಮುಹಮ್ಮದ್ ನಂದಾವರ, ಅರ್ಷದ್ ಸರವು, ಸಿರಾಜ್ ಮದಕ, ಮಹಮ್ಮದ್ ಶರೀಫ್ ಶಾಂತಿ ಅಂಗಡಿ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಯಂಗಡಿ, ವೆಂಕಪ್ಪ ಪೂಜಾರಿ, ಕುಶಲ ಎಂ.ಪೆರಾಜೆ, ಶ್ರೀಧರ್ ರೈ ಕುರ್ಲೆತ್ತಿಮಾರು, ಜಿ.ಎಂ.ಇಬ್ರಾಹಿಂ ಮಂಚಿ, ಹಸೈನಾರ್ ಕುಕ್ಕಾಜೆ, ಎನ್.ಅಬ್ದುಲ್ ಕರೀಂ ಬೊಳ್ಳಾಯಿ, ಶೋಭಾ ಶೆಟ್ಟಿ, ಅಲ್ಬರ್ಟ್ ಮಿನೇಜಸ್,ಯೂಸುಫ್ ಕರಂದಾಡಿ, ಸಿದ್ದೀಕ್ ಸರವು, ಅನ್ವರ್ ಕರೋಪಾಡಿ, ಮಧುಸೂದನ ಶೆಣೈ,  ಸಮದ್ ಕೈಕಂಬ ಮೊದಲಾದವರು ಭಾಗವಹಿಸಿದ್ದರು.