ಡೈಲಿ ವಾರ್ತೆ: 19/April/2024

ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ

ಬಂಟ್ವಾಳ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಶುಕ್ರವಾರ  ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಭೇಟಿ ನೀಡಿದರು.

    ಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಬಿ ಮೂಡಾ ಗ್ರಾಮದ ದ.ಕ. ಜಿ.ಪಂ.ಹಿ.ಪ್ರಾ.ಶಾಲೆ ಕೊಡಂಗೆ   ಮತಗಟ್ಟೆ ಸಂಖ್ಯೆ 122, 123 ಮತ್ತು 124 ಗಳಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

     ತಹಶೀಲ್ದಾರ್‌ ಅರ್ಚನಾ ಭಟ್‌, ಚುನಾವಣಾ ಉಪ ತಹಶೀಲ್ದಾರ್‌ ನವೀನ್‌ ಕುಮಾರ್‌ ಬೆಂಜನಪದವು, ಕಂದಾಯ ನಿರೀಕ್ಷಕ ಜನಾರ್ಧನ ಜೆ., ವಿಜಯ್‌ ಆರ್.‌, ಗ್ರಾಮ ಆಡಳಿತ ಅಧಿಕಾರಿ ಕರಿಬಸಪ್ಪ ನಾಯಕ್‌, ಮತಗಟ್ಟೆ ಅಧಿಕಾರಿಗಳಾದ ಜ್ಯೋತಿ, ಸೌಮ್ಯ, ಆಶಾ ಉಪಸ್ಥಿತರಿದ್ದರು.