ಡೈಲಿ ವಾರ್ತೆ: 27/April/2024

ತಪ್ಪಿದ ಬಾರಿ ಅನಾಹುತ , ಟಯ‌ರ್ ಸ್ಫೋಟ ಆಗಿ ಹೊತ್ತಿ ಉರಿದ ಬಸ್,

ಖಾಸಗಿ ಐಷಾರಾಮಿ ಬಸ್ಸಿನ ಟಯ‌ರ್ ಸ್ಫೋಟ ಕೊಂಡ ಕಾರಣ ಹೊತ್ತಿ ಉರಿದಿದೆ, ಈ ಘಟನೆ ಮುಂಬೈ-ಪುಣೆ ಎಕ್ಸ್ ಪ್ರೆಸ್ ವೇನಲ್ಲಿ ನಡೆದಿದೆ.
ಅದೃಷ್ಟವಶಾತ್ ಬಸ್ ನಲ್ಲಿದ್ದ 36 ಜನ ಪಾರಾಗಿದ್ದಾರೆ.


ಬಸ್‌ ಮುಂಬೈನಿಂದ ಪುಣೆಗೆ ತೆರಳುತ್ತಿದ್ದಾಗ ಮಾವಲ್‌ ತಾಲೂಕಿನ ಅಧೆ ಗ್ರಾಮದ ಬಳಿ ಬೆಳಿಗ್ಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.  ಬಸ್‌ ಚಾಲಕನ ಚಾತುರ್ಯದಿಂದ ಎಲ್ಲಾ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ತ್ವರಿತವಾಗಿ ಸ್ಥಳಾಂತರಿಸಲು ಅನುವು ಮಾಡಿಕೊಟ್ಟಿತು, ಸಂಭಾವ್ಯ ಅನಾಹುತವನ್ನು ತಪ್ಪಿಸಿತು.
ಭಾರತೀಯ ರಿಸರ್ವ್ ಬೆಟಾಲಿಯನ್ ಗಸ್ತು ತಂಡ, ದೇವದೂತ್ ವ್ಯವಸ್ಥೆ ಡೆಲ್ಟಾ ಫೋರ್ಸ್ ಮತ್ತು ವಡ್ಗಾಂವ್ ಮಾವಲ್ ಸಂಚಾರ ಪೊಲೀಸರ ಸಂಘಟಿತ ಪ್ರಯತ್ನಗಳಿಗೆ ಬೆಂಕಿಯನ್ನು ನಂದಿಸಿದ್ದಾರೆ ಎಂದು ವರದಿಯಾಗಿದೆ