ಡೈಲಿ ವಾರ್ತೆ: 29/April/2024

ರಾಮನಗರದಲ್ಲಿ ನಡೆದ ದುರ್ಘಟನೆ , ನದಿಯಲ್ಲಿ ಮುಳುಗಿ ಐದು ಮಂದಿ ದಾರುಣ ಸಾವು!

ರಾಮನಗರ: ಕನಕಪುರದ ಸಂಗಮ ಕಾವೇರಿಗೆ ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ  ಸೋಮವಾರ ನಡೆದಿದೆ.
ಮೂವರು ಯುವತಿಯರು, ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರು ಪೀಣ್ಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಹರ್ಷಿತ, ಅಭಿಷೇಕ್, ತೇಜಸ್, ವರ್ಷ, ಸ್ನೇಹ ಮೃತ ದುರ್ದೈವಿಗಳು.
ಬೆಂಗಳೂರಿನ ಪೀಣ್ಯ ಸೆಕೆಂಡ್‌ ಸ್ಟೇನ್‌ನಲ್ಲಿನ ಇಂಜಿನಿಯರಿಂಗ್‌ ಕಾಲೇಜಿಗೆ ಸೇರಿದ ವಿದ್ಯಾರ್ಥಿಗಳು ಸೋಮವಾರ ಮಧ್ಯಾಹ್ನ ಮೇಕೆ ದಾಟು ಬಳಿಯ ಸಂಗಮಕ್ಕೆ ಪ್ರವಾಸ ಬಂದಿದ್ದರು ಎನ್ನಲಾಗಿದೆ.

ಸ್ಥಳಕ್ಕೆ ಸಾತನೂರು ಪೊಲೀಸರು ಭೇಟಿ ನೀಡಿ ಮೃತದೇಹಗಳನ್ನು ಹೊರತೆಗೆದು ಮೃತ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿದ್ದಾರೆ. 
ಇವರೆಲ್ಲ 22ರಿಂದ 24 ವರ್ಷ ವಯಸ್ಸಿನವರು ಎನ್ನಲಾಗಿದೆ.