ಡೈಲಿ ವಾರ್ತೆ: 01/ಮೇ /2024

ಪ್ರೀತಿಗಾಗಿ ಸ್ನೇಹಿತನ ಮೇಲೆ ಹಲ್ಲೆ ಮಾಡಿದ ಪಾಗಲ್ ಪ್ರೇಮಿ

ಬೆಂಗಳೂರು: ಪ್ರೀತಿಸುತ್ತಿದ ಯುವತಿಗೆ ಮೆಸೇಜ್ ಮಾಡುತ್ತಿದನ್ನು ತಿಳಿದು
ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಪುಡಿ ರೌಡಿಗಳನ್ನ ಪೊಲೀಸರು ಬಂಧಿಸಿದ್ದಾರೆ.


ಎನಿದು ಪಾಗಲ್ ಪ್ರೇಮಿ ಕಥೆ:
ಈತನ ಸ್ನೇಹಿತ ಹರ್ಷಿತ್ ಕುಮಾರ್ ಬುಲ್ ಟೆಂಪಲ್ ರಸ್ತೆಯಲ್ಲಿ ಬರುವ ಉಮಾ ಟಾಕೀಸ್ ಬಳಿ ಫ್ಲವರ್ ಡೆಕೊರೇಷನ್ ಅಂಗಡಿ ಇಟ್ಟುಕೊಂಡಿರುತ್ತಾನೆ.
ಶಶಾಂಕ್ ಲವರ್ ಹರ್ಷಿತ್ ಕುಮಾರ್ ಗೆ ಪರಿಚಯವಾಗಿರುತ್ತಾರೆ. ಹರ್ಷಿತ್ ಕುಮಾರ್ ಪರಿಚಯ ಸ್ನೇಹಕ್ಕೆ ತಿರುಗಿ ಯುವತಿ ಹಾಗೂ ಹರ್ಷಿತ್ ಇಬ್ಬರು ಚಾಟ್ ಮಾಡಿಕೊಂಡಿರುತ್ತಾರೆ. ಇದು ಶಶಾಂಕ್ ಗಮನಕ್ಕೆ ಬಂದು ಪ್ರಶ್ನೆ ಮಾಡಿದ್ದಾನೆ ಇಬ್ಬರ ಗಲಾಟೆ ಹೊಡೆತಡಕ್ಕೆ ತಿರುಗಿದೆ.


ಸ್ನೇಹಿತ ನಂದನ್ ಜೊತೆ ಸೇರಿಕೊಂಡು ಹರ್ಷಿತ್ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿರುತ್ತಾರೆ. ಸ್ಥಳೀಯರು ಹಲ್ಲೆಗೆ ಒಳಗಾಗಿದ್ದ ಹರ್ಷಿತ್ ಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಾಗಿದೆ.
ಆರೋಪಿ ಶಶಾಂಕ್ ಹಾಗೂ ನಂದನ್ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.