ಡೈಲಿ ವಾರ್ತೆ: 10/ಮೇ /2024

ಮಂಗಳೂರು: ರಿಕ್ಷಾ ಚಾಲಕನಿಗೆ  ದುಷ್ಕರ್ಮಿಗಳಿಂದ ಚೂರಿ ಇರಿತ – ಪ್ರಕರಣ ದಾಖಲು

ಮಂಗಳೂರು: ನಗರದ ಪಣಂಬೂರು ಬೀಚ್ ನ ರಿಕ್ಷಾ ಚಾಲಕರು ಬಾಡಿಗೆಯ ವಿಷಯದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಮಂಗಳೂರು ನಗರದ ರಿಕ್ಷಾ ಚಾಲಕ ಅರಾಫತ್ (30) ಎಂಬವರಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಪಣಂಬೂರು ಬೀಚ್ ಬಳಿ ಗುರುವಾರ ನಡೆದಿದೆ.

ಅರಾಫತ್ ಎಂಬುವವರು ಎಂದಿನಂತೆ ಮಂಗಳೂರಿನಿಂದ ಪಣಂಬೂರು ಬೀಚ್ ಗೆ ಬಾಡಿಗೆ ಪ್ರಯಾಣಿಕರನ್ನು ಬಿಟ್ಟು ಅಲ್ಲಿಂದ ಮತ್ತೆ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯಲು ರಿಕ್ಷಾ ಪಾರ್ಕ್ ಬಳಿ ಕಾಯುತ್ತಿದ್ದಾಗ ಅಲ್ಲಿನ ಸ್ಥಳೀಯ ರಿಕ್ಷಾ ಚಾಲಕರು  ಬಂದು ಬಾಡಿಗೆ ಮಾಡುವಂತಿಲ್ಲ ಎಂದು ಮಾತಿನ ಚಕಮಕಿ ನಡೆದಾಗ ಏಕಾಏಕಿ ಚಾಕುವಿನಿಂದ ಅರಾಫತ್ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ಅರಾಫತ್ ಕೈಗೆ ಗಾಯವಾಗಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.