ಡೈಲಿ ವಾರ್ತೆ: 12/ಜೂ./2024

ಸಾಗರ: ಮನೆಯಲ್ಲಿ ಅಕ್ರಮವಾಗಿ ಗೋ ಮಾಂಸ ಮಾರಾಟ – ಪೊಲೀಸ್ ದಾಳಿ, ಓರ್ವನ ಬಂಧನ, ಗೋ ಮಾಂಸ, ವಾಹನ ವಶಕ್ಕೆ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕು ಎಸ್.ಎನ್. ನಗರ ಹೊಸ ಬಡಾವಣೆ ಇಂದಿರಾಗಾಂಧಿ ಕಾಲೇಜು ಸಮೀಪ  ಕಾರ್ಯಕರ್ತರ ಖಚಿತ ಮಾಹಿತಿ ಮೇರೆಗೆ ಸಾಗರ ನಗರ ಪೊಲೀಸರು ದಾಳಿ ನಡೆಸಿ ಮನೆಯಲ್ಲಿ ಗೋ ಮಾಂಸ ಮಾರುತ್ತಿದ್ದ ವ್ಯಕ್ತಿ ಹಾಗೂ ಗೋ ಮಾಂಸ ಹಾಗೂ ವಾಹನವನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.

ಈ ವ್ಯಕ್ತಿಯೂ ಕಳೆದ ಮೂರು ತಿಂಗಳ ಹಿಂದೆಯೂ ಸಹ ಇದೇ ಮನೆಯಲ್ಲಿ  ಗೋ ಮಾಂಸ ಮಾರುತ್ತಿದ್ದಾಗ ಪೋಲಿಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಸಾಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.