


ಡೈಲಿ ವಾರ್ತೆ: 23/ಜೂ./2024


ಯಡೂರು ಅಬ್ಬಿಫಾಲ್ಸ್ ನಲ್ಲಿ ಬೆಂಗಳೂರು ಪ್ರವಾಸಿಗ ನೀರುಪಾಲು!
ಹೊಸನಗರ: ತಾಲೂಕಿನ ಯಡೂರು ಅಬ್ಬಿಫಾಲ್ಸ್ ನೋಡಲು ಬಂದ ಬೆಂಗಳೂರು ಪ್ರವಾಸಿಗ ನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದೆ.
ಬೆಂಗಳೂರು ಬಸವನಗುಡಿ ಉದ್ಯೋಗಿ, ಬಳ್ಳಾರಿ ನಿವಾಸಿ ವಿನೋದ್ (26) ಜಲಪಾತ ವೀಕ್ಷಿಸುವ ವೇಳೆ ಕಾಲು ಜಾರಿ ಅಬ್ಬಿಗುಂಡಿಗೆ ಬಿದ್ದಿದ್ದಾನೆ. ಆತ ಮತ್ತೆ ಗುಂಡಿಯಿಂದ ಮೇಲೆ ಬರದ ಹಿನ್ನೆಲೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ನಗರ ಠಾಣೆ ಪಿಎಸ್ಐ ರಮೇಶ್, ಅಗ್ನಿಶಾಮಕ ದಳ ಆಗಮಿಸಿದ್ದು ಕಾರ್ಯಾಚರಣೆ ನಡೆಸಲಾಗಿದೆ.