ಡೈಲಿ ವಾರ್ತೆ: 13/ಜುಲೈ /2024

ಹೆಮ್ಮಾಡಿ: ಗಾಳಿ ಮಳೆಗೆ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂ – ತಪ್ಪಿದ ದೊಡ್ಡ ದುರಂತ, ಸಂಚಾರ ಅಸ್ತವ್ಯಸ್ತ!

ಕುಂದಾಪುರ: ಹೆಮ್ಮಾಡಿ ಸಂತೋಷ್ ನಗರ ರಸ್ತೆಯಲ್ಲಿ ಬೃಹತ್ ಮರ ಬಿದ್ದು ವಿದ್ಯುತ್ ಕಂಬಗಳು ಜಖಂ ಗೊಂಡು ಶಾಲೆ ಬಸ್ಸೊಂದು ಪಾರಾದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಬಾರಿ ಗಾಳಿ ಮಳೆಗೆ ಬೃಹತ್ ಮರವೊಂದು ಧರಾಶಾಯಿಯಾಗಿ ಹಲವು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆಯಲ್ಲಿ ಬಿದಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ಅಲ್ಲದೆ ಅದೃಷ್ಟವಶಾತ್ ಶಾಲೆ ಬಸ್ಸೊಂದು ಪಾಸಾದ ಒಂದು ನಿಮಿಷದಲ್ಲಿ ಮರಬಿದ್ದಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಮೆಸ್ಕಾಂನವರು ಬಂದಿದ್ದು ತೆರವು ಕಾರ್ಯಾಚರಣೆಯಲ್ಲಿ ಪಂಚಾಯತ್ ಮಾಜಿ ಸದಸ್ಯ ಸೈಯದ್ ಯಾಸಿನ್ ನೇತೃತ್ವದ ತಂಡದವರು ಹಾಗೂ ಹಾಲಿ ಪಂಚಾಯತ್ ಸದಸ್ಯ ರಾಘು ಕಾರ್ಯನಿರ್ವಹಿಸುತ್ತಿದ್ದಾರೆ.