ಡೈಲಿ ವಾರ್ತೆ: 13/ಜುಲೈ /2024

ಬಜ್ಪೆ: ಬುರ್ಖಾ ಧರಿಸಿ ಸೊಸೈಟಿ ನುಗ್ಗಿ ಆಸೀಡ್ ದಾಳಿ ನಡೆಸಿ ಸುಲಿಗೆ ಯತ್ನಿಸಿದ ಪ್ರಕರಣ – ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

                                                                                                         ಮಂಗಳೂರು:  ತಾಲೂಕು ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ ಕುನ್ಹ ಎಂಬವರ ಬಜಪೆ ಪೇಟಿಯಲ್ಲಿರುವ ಬಜಪೆ ಫೈನಾನ್ಸ್ ಕೊರ್ಪೊರೇಷನ್(ರಿ) ಸೊಸೈಟಿಗೆ ಜು. 4 ರಂದು  ಸಂಜೆ ಸುಮಾರು 4.00 ಗಂಟೆಗೆ ಕಪ್ಪು ಬಣ್ಣದ ಸ್ಕೂಟರ್ ನಲ್ಲಿ ಬುರ್ಖಾ ಧರಿಸಿದ ಮಹಿಳೆ ಮತ್ತು ಇಬ್ಬರು ಗಂಡಸರು ಬಂದು, ಬುರ್ಖಾ ಹಾಕಿಕೊಂಡಿರುವ ಹೆಂಗಸು ಸೊಸೈಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಯರ ಮೇಲೆ ಆಸಿಡ್ ಹಾಕಿ ಕಚೇರಿಯಲ್ಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಲು ಪ್ರಯತ್ನಿಸಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. 

ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಜು. 13 ರಂದು ಶನಿವಾರ 3 ಮಂದಿ ಆರೋಪಿತರನ್ನು ಬಂಧಿಸುವಲ್ಲಿ ಬಜಪೆ ಪೊಲೀಸರು ಯಶಸ್ವಯಾಗಿರುತ್ತಾರೆ.

ಬಜಪೆ ಪೇಟೆಯಲ್ಲಿ ಹಾಡಾ ಹಗಲೆ ಭಯಾನಕ ರೀತಿಯಲ್ಲಿ ಆಸಿಡ್ ಬಳಸಿ ಸುಲಿಗೆ ಮಾಡಲು ಪ್ರಯತ್ನಿಸಿ ಭಯದ ವಾತಾವರಣ ಸೃಷ್ಠಿಸಿದ್ದ ಆರೋಪಿಗಳನ್ನು ಬಂಧಿಸಿದ ಬಗ್ಗೆ ಪರಿಸರದ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

ಆರೋಪಿಗಳು ಕೃತ್ಯದ ಮೊದಲು, ಕೃತ್ಯದ ನಂತರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಒಟ್ಟು ಸುಮಾರು 15 ಲಕ್ಷ ರೂ ಮೌಲ್ಯದ ವಾಹನಗಳಾದ ಇನೋವಾ ಕಾರು, ಸ್ವಿಫ್ಟ್ ಕಾರು ಮತ್ತು ಸ್ಕೂಟರ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಬಂಧಿತ ಆರೋಪಿಗಳು ಬಜ್ಪೆ ಶಾಂತಿ ಗುಡ್ಡೆಯ ಪ್ರಿತೇಶ್ @ ಪ್ರಿತು (31), ಸುರತ್ಕಲ್ ಕೋಡಿಕೇರೆ ಧನರಾಜ್ @ಧನು,
ಬಾಲ ಗ್ರಾಮದ ಕುಂಬಳಕೆರೆ ಕುಸುಮಾಕರ @ಅಣ್ಣು (37) ಎಂದು ತಿಳಿದು ಬಂದಿದೆ.

ಪ್ರಿತೇಶ್ @ ಪ್ರಿತು ನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ ದಾಖಲಾಗಿರುತ್ತವೆ. ಧನರಾಜ್ @ಧನು ನ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮೂಡಬಿದರೆ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಜೀವ ಬೆದರಿಕೆ ಹಾಕಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಕುಸುಮಾಕರ @ಅಣ್ಣು ನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕಳವು ಪ್ರಕರಣ ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ದಾಖಲಾಗಿರುತ್ತದೆ.

ಈ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್ IPS ರವರ ಮಾರ್ಗದರ್ಶನದಂತೆ, DCP (L&O) ಶ್ರೀ ಸಿದ್ದಾರ್ಥ ಗೋಯೆಲ್ IPS ಮತ್ತು DCP (ಕ್ರೈಂ) ಶ್ರೀ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಯವರಾದ ಶ್ರೀ ಮನೋಜ್ ಕುಮಾರ್ ಮತ್ತು ಬಜಪೆ ಪೊಲೀಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ PSI ರೇವಣ ಸಿದ್ದಪ್ಪ, PSI ಕುಮಾರೇಶನ್, PSI ಲತಾ, ಸಿಬ್ಬಂದಿಯವರಾದ ASI ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ದೇವಪ್ಪ, ಬಸವರಾಜ್ ಪಾಟೀಲ್, ಕೆಂಚಪ್ಪ, ಚಿದಾನಂದ, ಪ್ರಕಾಶ್, ದುರ್ಗಾ ಪ್ರಸಾದ್, ಜಗದೀಶ್, ದಯಾನಂದ, ಮದು, ಅನಿಲ್ ಕುಮಾರ್, ಭಿಮಪ್ಪ, ವಿರುಪಾಕ್ಷ, ಭರಮಪ್ಪ, ಚೇತನ್ , ಪ್ರಜ್ವಲ್ ಮತ್ತು ಇತರರು ಭಾಗವಹಿಸಿರುತ್ತಾರೆ.