ಡೈಲಿ ವಾರ್ತೆ: 17/ಜುಲೈ /2024

ಕೆಐಸಿ ಬಂಟ್ವಾಳ ವಲಯ ಸಮಿತಿ ಅಸ್ತಿತ್ವಕ್ಕೆ, ಅಧ್ಯಕ್ಷರಾಗಿ ಹಾರೂನ್ ರಶೀದ್ ಬಂಟ್ವಾಳ

ಬಂಟ್ವಾಳ : ಪುತ್ತೂರು – ಕುಂಬ್ರದ ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ (ಕೆಐಸಿ) ಕುಂಬ್ರ ಇದರ ಪ್ರಚಾರಾರ್ಥ ಪ್ರತೀ ಏರಿಯಾ ಸಮಿತಿ ರಚನಾ ಸಭೆಯು ಇತ್ತೀಚೆಗೆ ಪಾಣೆಮಂಗಳೂರು ಆಲಡ್ಕದ ಎಸ್.ಎಸ್. ಹಾಲ್ ನಲ್ಲಿ ನಡೆಯಿತು.

ಬಾಸಿತ್ ತಂಙಳ್ ಕುಕ್ಕಾಜೆ ಅವರ ದುಆ ನೆರವೇರಿಸಿದರು. ಸಂಸ್ಥೆಯ ಪ್ರಾಂಶುಪಾಲ ಅಬೂಬಕ್ಕರ್ ಮದನಿ ಅರ್ರಶಾದಿ ಉದ್ಘಾಟಿಸಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಇದೇ ವೇಳೆ ನೂತನ ಬಂಟ್ವಾಳ ವಲಯ ಸಮಿತಿಯನ್ನು ರಚಿಸಲಾಯಿತು.

ಗೌರವ ಸಲಹೆಗಾರರಾಗಿ ಬಾಸಿತ್ ತಂಙಳ್ ಕುಕ್ಕಾಜೆ, ಇರ್ಷಾದ್ ದಾರಿಮಿ ಮಿತ್ತಬೈಲ್, ಶಕೂರ್ ಹಾಜಿ ಡಿ.ಪಿ, ಮುಹಮ್ಮದ್ ಹಾಜಿ ಸಾಗರ್ ಇವರನ್ನು ಸ್ವೀಕರಿಸಲಾಯಿತು.


ನೂತನ ಅಧ್ಯಕ್ಷರಾಗಿ ಹಾರೂನ್ ರಶೀದ್ ಬಂಟ್ವಾಳ ಪ್ರಧಾನ ಕಾರ್ಯದರ್ಶಿಯಾಗಿ ಉಬೈದುಲ್ಲಾಹ್ ಹಾಜಿ ಗೂಡಿನಬಳಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಅನ್ಸಾರ್ ಕೌಸರಿ ಮಂಡಾಡಿ ಕೋಶಾಧಿಕಾರಿಯಾಗಿ ರಿಯಾಝ್ ತಾಳಿಪಡ್ಪು ಅವರನ್ನು ಆಯ್ಕೆಯಾದರು.

ಉಪಾಧ್ಯಕ್ಷರುಗಳಾಗಿ ಬಶೀರ್ ಮಜಲ್, ಅಲ್ತಾಫ್ ಕೆಳಗಿನ ಮಿತ್ತಬೈಲ್, ಮುಹಮ್ಮದ್ ಮಜಲ್ , ಖಾದರ್ ಮಾಸ್ಟರ್ ಬಂಟ್ವಾಳ, ಬಶೀರ್ ಆಲಡ್ಕ, ರಹೀಂ ತಾಳಿಪಡ್ಪು, ಹನೀಫ್ ಹಾಸ್ಕೊ, ನಝೀರ್ ಹಾಜಿ ಬೊಳ್ಳಾಯಿ, ಜೊತೆ ಕಾರ್ಯದರ್ಶಿ ಗಳಾಗಿ ಇಮ್ರಾನ್ ಮಜಲೋಡಿ, ಅಶ್ರಫ್ ಶಾಂತಿ ಅಂಗಡಿ, ಜಬ್ಬಾರ್ ಪಲ್ಲಮಜಲ್, ಆರಿಫ್ ನಂದಾವರ, ತಮೀಮ್ ಮೈಂದಾಲ, ಸಗೀರ್ ನಂದರಬೆಟ್ಟು, ಅಬೂಬಕ್ಕರ್ ಗುಡ್ಡೆಅಂಗಡಿ, ಬದ್ರುದ್ದೀನ್ ಪೆರಾಲ, ಮೀಡಿಯಾ ವಿಂಗ್ ಸದಸ್ಯರಾಗಿ ಖಲಂದರ್ ತುಂಬೆ, ಸಿನಾನ್ ಪರ್ಲಿಯ ಅವರು ಆಯ್ಕೆಯಾದರು 

 ಏರಿಯಾ ಉಸ್ತುವಾರಿಗಳಾಗಿ

ಮಿತ್ತಬೈಲ್ – ಅಶ್ರಫ್ ಶಾಂತಿಅಂಗಡಿ,
ತುಂಬೆ – ಅಬ್ದುರ್ರಹ್ಮಾನ್ ತುಂಬೆ,
ಅಗ್ರಹಾರ – ಇಮ್ರಾನ್ ಮಜಲೋಡಿ,
ಮೈಂದಾಲ – ತಮೀಮ್, ತಾಳಿಪಡ್ಪು-ಇಮ್ರಾನ್ ಅದ್ದೇಡಿ,
ಪರ್ಲಿಯ – ಸಿನಾನ್, ನಂದರಬೆಟ್ಟು – ಸಗೀರ್, ಗೂಡಿನಬಳಿ – ಸಿದ್ದೀಕ್ ಹಾಜಿ, ನಂದಾವರ – ಆರಿಫ್,
ಬಂಟ್ವಾಳ – ಹಾರೂನ್ ರಶೀದ್,
ನೆಹರುನಗರ – ಇಮ್ರಾನ್,
ಆಲಡ್ಕ – ಬಶೀರ್, ಕಾರಾಜೆ – ಉಸ್ಮಾನ್, ಗುಡ್ಡೆಅಂಗಡಿ – ಅಬೂಬಕ್ಕರ್, ಲೊರೊಟ್ಟೊಪದವು- ಹುಸೈನ್, ಪಾದಿಲ – ಬದ್ರುದ್ದೀನ್,
ಪೆರಿಯಪಾದೆ – ಶಾಕಿರ್,
ಅಜಿಲಮೊಗರು – ಲತೀಫ್,
ಪಲ್ಲಮಜಲ್ – ಜಬ್ಬಾರ್,
ಕೆಳಗಿನ ಮಿತ್ತಬೈಲ್ – ಅಲ್ತಾಫ್,
ಬೊಳ್ಳಾಯಿ – ನಝೀರ್ ಹಾಜಿ ಅವರನ್ನು ನೇಮಿಸಲಾಯಿತು.

ಸಂಸ್ಥೆಯ ವ್ಯವಸ್ಥಾಪಕ ಅಬ್ದುಸ್ಸತ್ತಾರ್ ಕೌಸರಿ ಸ್ವಾಗತಿಸಿ, ಹನೀಫ್ ಮೌಲವಿ ವಂದಿಸಿದರು. ಬಶೀರ್ ಮಜಲ್ ಕಾರ್ಯಕ್ರಮ ನಿರೂಪಿಸಿದರು