ಡೈಲಿ ವಾರ್ತೆ: 20/ಜುಲೈ /2024

ಉಡುಪಿಯಲ್ಲೊಂದು ಅಮಾನವೀಯ ಘಟನೆ: ನಾಯಿಯ ಶವ ದ್ವಿಚಕ್ರ ವಾಹನಕ್ಕೆ‌ ಕಟ್ಟಿ ಎಳೆದುಕೊಂಡು ಹೋದ ವ್ಯಕ್ತಿ

ಶಿರ್ವ: ನಾಯಿಯ ಶವವನ್ನು ದ್ವಿಚಕ್ರ ವಾಹನಕ್ಕೆ ಸರಪಳಿಯಿಂದ ಬಿಗಿದು ಎಳೆದುಕೊಂಡು ಹೋದ ಅಮಾನವೀಯ ಘಟನೆ ಜು.20ರ ಶನಿವಾರ ಬೆಳಗ್ಗೆ ಶಿರ್ವ ಮುಖ್ಯ ರಸ್ತೆಯಲ್ಲಿನಡೆದಿದೆ.

ಅಮಾನವೀಯ ವ್ಯಕ್ತಿ ಕೊಂಬಗುಡ್ಡೆಯ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದ್ದು ಶಿರ್ವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಾಣಿ ದಯಾಸಂಘದವರು ಕೇಸು ದಾಖಲಿಸುವ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ.