ಡೈಲಿ ವಾರ್ತೆ: 23/ಜುಲೈ /2024

ಕೋಟ: ಶ್ರೀ ಅಘೋರೇಶ್ವರ ಕಲಾರಂಗ ದ ವತಿಯಿಂದ ಮುದ್ದು ಕೃಷ್ಣ ಸ್ಪರ್ದೆ

ಕೋಟ: ಶ್ರೀ ಅಘೋರೇಶ್ವರ ಕಲಾರಂಗ (ರಿ). ಕಾರ್ತಟ್ಟು,ರೋಟರಿ ಕ್ಲಬ್ ಕೋಟ ಸಿಟಿ ಮತ್ತು ಗಾಣಿಗ ಯುವ ಸಂಘಟನೆ ಹಾಗೂ ಮಹಿಳಾ ಘಟಕ ಕೋಟ ಇವರ ಸಹಯೊಗ ದಲ್ಲಿ ಶಕ್ತಿಸ್ಟೋನ್ ಕಟ್ಟಿಂಗ್ & ಪಾಲಿಶಿಂಗ್ ಕಂ. ಗುಂಡ್ಮಿ,ಸಾಸ್ತಾನ ಇವರ ಪ್ರಾಯೋಜಕತ್ವದಲ್ಲಿ ಮುದ್ದು ಕೃಷ್ಣ ಸ್ಪರ್ದೆ ಕಾರ್ಯಕ್ರಮವು ಆಗಸ್ಟ್ 11 ರ ರವಿವಾರದಂದು ಬೆಳ್ಳಿಗ್ಗೆ ಶ್ರೀ ಅಘೋರೇಶ್ವರ ಸಭಾಭವನದಲ್ಲಿ ನಡೆಯಲಿದೆ.

ಸ್ಪರ್ದೆಯು ಮೂರು ವಿಭಾಗದಲ್ಲಿ ನಡೆಯಲಿದ್ದು ಬಾಗವಹಿಸಿದ ಪ್ರತಿಯೊಬ್ಬ. ಸ್ಪರ್ಧಾಳು ಗಳಿಗೆ ಪ್ರಶಾಂಸ ಪತ್ರ ಮತ್ತು ವಿಜೇತರಿಗೆ ಶಾಶ್ವತ ಫಲಕ ನೀಡಲಾಗುವುದು ಹಾಗೂ ವೇಷಭೂಷಣ ವನ್ನು ಪಾವತಿಯೊಂದಿಗೆ ಸ್ಥಳದಲ್ಲಿಯೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಕಾರ್ಯಕ್ರಮ ದ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.