ಡೈಲಿ ವಾರ್ತೆ: 23/ಜುಲೈ /2024

ಬಂಟ್ವಾಳ: ಬಾರಿ ಬಿರುಗಾಳಿ ಮಳೆಗೆ ಹಲವು ವಿದ್ಯುತ್ ಕಂಬಗಳು, ಮೊಬೈಲ್ ಟವರ್, ಅಂಗಡಿ ಹೋಟೆಲ್ ಗಳ ನಾಮಫಲಕಗಳು ಧರಾಶಾಹಿ!

ಬಂಟ್ವಾಳ : ಹಠಾತ್ ಸುರಿದ ಗಾಳಿ ಮಳೆಗೆ ಹಲವು ವಿದ್ಯುತ್ ಕಂಬಗಳು, ಮೊಬೈಲ್ ಟವರ್, ಅಂಗಡಿ ಹೋಟೆಲ್ ಗಳ ನಾಮಫಲಕಗಳು ಧರಾಶಾಹಿಯಾದ ಘಟನೆ ಬಿ.ಸಿ.ರೋಡ್ ಪರಿಸರದಲ್ಲಿ ಮಂಗಳವಾರ ರಾತ್ರಿ 10 ರ ವೇಳೆಗೆ ನಡೆದಿದೆ.

ಘಟನೆಯಿಂದಾಗಿ ಬಿ.ಸಿ.ರೋಡ್ ನಾರಾಯಣ ಗುರು ವೃತ್ತದಿಂದ ಕೈಕಂಬದ ತನಕ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವೃತ್ತದ ಬಳಿ ವಿದ್ಯುತ್ ಕಂಬಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಉರುಳಿ ಬಿದ್ದಿದ್ದು ರಸ್ತೆ ಸಂಚಾರ ಸ್ಥಗಿತಗೊಂಡು ಟ್ರಾಫಿಕ್ ಜಾಮ್ ಉಂಟಾಗಿದೆ .

ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು, ಬಂಟ್ವಾಳ ನಗರ ಹಾಗೂ ಸಂಚಾರಿ ಪೊಲೀಸರು ದೌಡಾಯಿಸಿದ್ದು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಘಟನೆಯಿಂದ ಯಾವುದೇ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ.