ಡೈಲಿ ವಾರ್ತೆ: 24/ಜುಲೈ /2024

ಸಾಲಿಗ್ರಾಮದಲ್ಲಿ ಉನ್ನತ ತಂತ್ರಜ್ಞಾನದ ನುರಿತ ವೈದ್ಯರ ಡೆಂಟಲ್ ಕೇರ್ ಶುಭಾರಂಭ

ಸಾಲಿಗ್ರಾಮ: ಸಾಲಿಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಸಮೀಪ ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಖ್ಯಾತ ದಂತ ತಜ್ಞ ಕಿರಣ್ ಕುಮಾರ್ ಕೆ. ಎಸ್. ಇವರ ಸಾಲಿಗ್ರಾಮ ಡೆಂಟಲ್ ಕೇರ್ ಚಿಕಿತ್ಸಾ ಕೇಂದ್ರವನ್ನು ಉದ್ಯಮಿ ಮತ್ತು ಕೊಡುಗೈ ದಾನಿ ಆನಂದ ಸಿ. ಕುಂದರ್ ಉದ್ಘಾಟಿಸಿದರು.

ವಿದೇಶದಲ್ಲಿ ಅಗತ್ಯ ವಿಧ್ಯಭ್ಯಾಸ ಮುಗಿಸಿ ಸೇವೆ ಸಲ್ಲಿಸಿ, ನಂತರದ ದಿನಗಳಲ್ಲಿ ದೇಶದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಪ್ರಸಿದ್ದಿ ಪಡೆದರೂ ಹುಟ್ಟೂರಲ್ಲಿ ಸೇವೆ ನೀಡಬೇಕೆಂದು ಡಾ. ಕಿರಣ್ ಮನಸ್ಸು ಮಾಡಿದ್ದು ಅವರ ಸೇವಾ ಮನೋಭಾವನೆ ದೊಡ್ಡದು. ಇಲ್ಲಿನ ಸುಸಜ್ಜಿತ ಸೇವೆ ಪಡೆದ ರೋಗಿಗಳು ಶೀಘ್ರ ಸಮಸ್ಯೆಯಿಂದ ಗುಣಮುಖರಾಗಲಿ ಎಂದು ಹಾರೈಸಿದರು.
ಡಾ. ಕಿರಣ್ ಕುಮಾರ್ ಮಾತಾಡಿ ನಮ್ಮಲ್ಲಿ ಡಿಜಿಟಲ್ ಎಕ್ಸರೇ, ಇಂಪ್ಲಾಂಟ್ಸ್, ಟೀಚ್ ವೈಟಿಂಗ್, ಓರಲ್ ಸರ್ಜರಿ ಇನ್ನೂ ಮುಂತಾದ ಸೇವೆಗಳನ್ನು ಅತ್ಯಾಧುನಿಕ ವೈದಕೀಯ ಉಪಕರಣಗಳ ಮೂಲಕ ಉತ್ತಮ ಸೇವೆಯನ್ನು ಗ್ರಾಮೀಣ ಜನರಿಗೆ ನೀಡಲಿದ್ದೇವೆ ಎಂದರು.


ಉದ್ಯಮಿ ಆನಂದ ಪಿ. ಸುವರ್ಣ, ಶ್ರೀ ಗುರುನರಸಿಂಹ ಸೌಹಾರ್ದ್ ಸಹಕಾರಿ ಸಿಇಓ ಜಿ ಎಮ್. ಸೋಮಯಾಜಿ, ಬಾಲಕೃಷ್ಣ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಶಂಕರ್ ಬಂಗೇರ, ಚಂದ್ರ ಪೂಜಾರಿ, ಹಾಗೂ ಕ್ಯಾಪ್ಟನ್ ಕೃಷ್ಣಪ್ಪ ಮತ್ತು ಶ್ರೀಮತಿ ನಿರ್ಮಲ ಕೃಷ್ಣಪ್ಪ ದಂಪತಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು