ಡೈಲಿ ವಾರ್ತೆ: 25/ಜುಲೈ /2024

ದಕ್ಷಿಣ ಕನ್ನಡ: ಬಾರಿ ಗಾಳಿಮಳೆಗೆ ಮನೆ ಮೇಲೆ ‌ತಡೆಗೋಡೆ ಕುಸಿದು ಬಾಲಕ ಮೃತ್ಯು!

ಜೋಕಟ್ಟೆ: ಭಾರೀ ಗಾಳಿ-ಮಳೆಗೆ ಜೋಕಟ್ಟೆಯ ಮನೆಯೊಂದರ ಮೇಲೆ ‌ತಡೆಗೋಡೆ ಕುಸಿದು ಬಾಲಕ‌ ಮೃತಪಟ್ಟ ಘಟನೆ ಗುರುವಾರ ಮುಂಜಾನೆ ನಡೆದಿದೆ.

ಮೃತ ಬಾಲಕ ಮೂಲ್ಕಿ ಕೊಲ್ನಾಡು ಲಿಂಗಪ್ಪಯ್ಯ ಕಾಡು ನಿವಾಸಿ ಶೈಲೇಶ್ (17) ಎಂದು ಗುರುತಿಸಲಾಗಿದೆ.

ದುರಂತಕ್ಕೊಳಗಾದ ಮನೆಗೆ ಬಾಲಕ ಅತಿಥಿಯಾಗಿ ಬಂದಿದ್ದ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.