ಡೈಲಿ ವಾರ್ತೆ: 29/ಜುಲೈ /2024

ಗಿರಿ ಫ್ರೆಂಡ್ಸ್ ಚಿತ್ರಪಾಡಿ ಸಂಸ್ಥೆವತಿಯಿಂದ ವನಮಹೋತ್ಸವ – “ಸೂರ್ಯ ಚಂದ್ರ ಇರುವ ತನಕವೂ ಗಿರಿ ಫ್ರೆಂಡ್ಸ್ (ರಿ) ಸಂಸ್ಥೆಯು ಸಮಾಜ ಮುಖಿ ಕಾರ್ಯ ಮಾಡುತಿರಲಿ – ಶಿಕ್ಷಕ ಸತಿಶ್ಚಂದ್ರ ಶೆಟ್ಟಿ

ಸಾಲಿಗ್ರಾಮ: ಗಿರಿಫ್ರೆಂಡ್ಸ್ (ರಿ )ಚಿತ್ರಪಾಡಿ -ಸಾಲಿಗ್ರಾಮ ಸಂಸ್ಥೆಯು ವನಮಹೋತ್ಸವವನ್ನು ರಾಷ್ತ್ರೀಯ ಹೆದ್ದಾರಿ 66ರ ಇಕ್ಕೆಲಾದಲ್ಲಿ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಲಾಯಿತು.

ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ್ ಚಂದ್ರಶೆಟ್ಟಿ ಮಾತನಾಡಿ, 
 "ಸೂರ್ಯ ಚಂದ್ರ ಇರುವ ತನಕ ವೂ ಗಿರಿ ಫ್ರೆಂಡ್ಸ್ (ರಿ )ಸಂಸ್ಥೆ ಯು ಸಮಾಜ ಮುಖಿ ಕಾರ್ಯ ಮಾಡುತಿರಲಿ "ಎಂದು ಶುಭ ಹಾರೈಸಿದರು.ಮುಖ್ಯ ಅತಿಥಿಯಾಗಿ ಅರುಣ್ ಕುಂದರ್, ಗಿರಿ ಮುತ್ತು ಪೌಲ್ಟ್ರಿ ಫಾರ್ಮ್ ಚಿತ್ರಪಾಡಿ ಉಪಸ್ಥಿತರಿದ್ದು

ವನ ಮಹೋತ್ಸವ ಕಾರ್ಯಕ್ರಮ ದ ಅಂಗವಾಗಿ ನೆಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ವಿಶ್ವನಾಥ್ ನಾವಡ ರವರು ವಹಿಸಿದ್ದರು.

ಸಂಸ್ಥೆಯ ಸಂಚಾಲಕರಾದ ರವಿ ಪೂಜಾರಿರವರು ಸಂಸ್ಥೆಯು ಮಾಡುತ್ತಿರುವ ಸಮಾಜ ಮುಖಿ ಕಾರ್ಯಹೀಗೆ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಸತೀಶ್ ಆಚಾರ್ ಪ್ರಾಸ್ತವಿಕ ಮಾತು ಗಳನ್ನಾಡಿದರು. ರಾಮಚಂದ್ರ ಆಚಾರ್ ರವರು ಪ್ರಾರ್ಥಿಸಿದರು, ಗೌರವ ಅಧ್ಯಕ್ಷ ಮಂಜುನಾಥ್ ಆಚಾರ್ ಸ್ವಾಗತಿಸಿದರು, ಕಾರ್ಯದರ್ಶಿ ಹರೀಶ್ ಆಚಾರ್ ವಂದಿಸಿದರು, ಶ್ರೀ ರಾಜೇಶ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯರೆಲ್ಲರೂ ಉಪಸಿತರಿದ್ದರು.