ಡೈಲಿ ವಾರ್ತೆ: 29/ಜುಲೈ /2024

ಶಿರೂರು ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಸುನ್ನಿ ಮಲಬಾರ್ ಅಸೋಸಿಯೇಶನ್ ಗೋವಾ ವತಿಯಿಂದ ಕಿಟ್ ವಿತರಣೆ

ಶಿರೂರು ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡ ಉಳುವರೆ ಗ್ರಾಮದ 7 ಕುಟುಂಬಗಳಿಗೆ ಅವರಿಗೆ ಬೇಕಾದ ದಿನನಿತ್ಯದ ಅಗತ್ಯ ವಸ್ತುಗಳ 30 ರೇಷನ್ ಕಿಟ್ಟನ್ನು ಸುನ್ನಿ ಮಲಬಾರ್ ಅಸೋಸಿಯೇಶನ್ ಗೋವಾ ವತಿಯಿಂದ ನೀಡಲಾಯಿತು.ಅಲ್ಲದೆ ಗಂಜಿ ಕೇಂದ್ರದಲ್ಲಿರುವ ಜನರಿಗೂ ಕಿಟ್ಟನ್ನು ವಿತರಿಸಲಾಯಿತು. ಹಾಗೂ ಮುಂದೆಯೂ ಕೂಡ ನಮ್ಮಿಂದ ಆಗುವ ಸಹಾಯವನ್ನು ನೀಡಲಿದ್ದೇವೆ ಎಂದು ಭರವಸೆಯನ್ನು ಸಂಘಟಕರು ನೀಡಿದರು.

ಈ ಸಂಧರ್ಭದಲ್ಲಿ ಸುನ್ನಿ ಮಲಬಾರ್ ಅಶೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್. ಹಾಗೂ ಸದಸ್ಯರಾದ ಕುಂಜಿಮೋನು,ಕಲಂದರ್,ಅಬ್ದುಲ್ ಸಲೀಮ್,ಅಬ್ದುಲ್ ರಹೀಮ್,ಹಾಗು ಗಂಗಾವಳಿಯ ಸಾಮಾಜಿಕ ಕಾರ್ಯಕರ್ತರಾದ ಹುಸೈನ್ ಬಿಜಾಪುರ್ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.