ಡೈಲಿ ವಾರ್ತೆ: 30/ಜುಲೈ /2024

ಕುಂದಾಪುರ: ಬೀಜಾಡಿ ಸಮುದ್ರದಲ್ಲಿ ತೇಲಿ ಬಂದ ಅಪರಿಚಿತ ಯುವಕನ ಶವ

ಕುಂದಾಪುರ: ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿ ಸಮುದ್ರದಲ್ಲಿ ಸುಮಾರು 35 ವರ್ಷದ ಅಪರಿಚಿತ ಯುವಕನ ಶವವೊಂದು ತೇಲಿ ಬಂದ ಘಟನೆ ಜು. 30 ರಂದು ಮಂಗಳವಾರ ಸಂಜೆ ನಡೆದಿದೆ.

ಗಂಗೊಳ್ಳಿ ಕಡೆಯಿಂದ ಕೋಟೇಶ್ವರ ಕಡೆಗೆ ಸಮುದ್ರದಲ್ಲಿ ತೇಲಿ ಬಂದ ಅಪರಿಚಿತ ಯುವಕನ ಮೃತದೇಹವೊಂದು ಬೀಜಾಡಿ ಕಡಲ ತೀರದಲ್ಲಿ ಪತ್ತೆಯಾಗಿದೆ.

ಸಮುದ್ರದಲ್ಲಿ ತೇಲಿ ಬರುತ್ತಿರುವ ಶವವನ್ನು ಗಮನಿಸಿದ ಸ್ಥಳೀಯರು ಕೊಡಲೇ ಪಂಚಾಯತ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯರ ಕಾರ್ಯಾಚರಣೆಯಿಂದ ಶವವನ್ನು ದಡ ಸೇರಿಸಲಾಯಿತು.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಕುಂದಾಪುರ ಶವಗಾರಕ್ಕೆ ಸಾಗಿಸಲಾಯಿತು.
ಸಂಬಂಧಪಟ್ಟ ವಾರಿಸುದಾರರು ಕುಂದಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.