ಡೈಲಿ ವಾರ್ತೆ: 06/ಆಗಸ್ಟ್/2024

ಹೇರಾಡಿ ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಪದ ಪ್ರಧಾನ ಕಾರ್ಯಕ್ರಮ: ನಿಮ್ಮಲ್ಲಿರುವ ಪ್ರತಿಭೆ ಯನ್ನು ಸಮಯ ಸಿಕ್ಕಾಗ ತೊರ್ಪಡಿಸಿ ಕೊಳ್ಳಿ – ಗಣೇಶ ಶೆಟ್ಟಿ

ಬ್ರಹ್ಮಾವರ: ಶ್ರೀ ವಿದ್ಯೇಶ ವಿದ್ಯಾಮಾನ್ಯ ನೇಷನಲ್ ಆಂಗ್ಲ ಮಾಧ್ಯಮ ಶಾಲೆ ಹೇರಾಡಿ – ಬಾರಕೂರು ಮತ್ತು ರೋಟರಿ ಕ್ಲಬ್ ಬಾರಕೂರು ನ ಜಂಟಿ ಆಶ್ರಯದಲ್ಲಿ ಇಂಟ ರಾಕ್ಟ್ ಕ್ಲಬ್ ನ ಪದ ಪ್ರಧಾನ ಮಾಡಿದ ರೋಟರಿ ಕ್ಲಬ್ ಬಾರಕೂರು ನ ಅಧ್ಯಕ್ಷ ರೋ. ಗಣೇಶ ಶೆಟ್ಟಿ ರವರು ” ನಿಮ್ಮಲ್ಲಿರುವ ಪ್ರತಿಭೆ ಯನ್ನು ಸಮಯ ಸಿಕ್ಕಾಗ ತೊರ್ಪಡಿಸಿ ಕೊಳ್ಳಿ” ಎಂದು ತಮ್ಮ ಮಾತು ಗಳನ್ನಾಡಿದರು.

    2024-25ರ  ಶಾಲೆಯ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾಗಿ ಕು. ಸಮೀಕ್ಷಾ, ಕಾರ್ಯದರ್ಶಿ ಯಾಗಿ ಕು. ತನಿಷಾ, ಇತರ ಪದಾಧಿಕಾರಿಗಳಾಗಿ, ಕೌಶಿಕ್, ಸಂಹಿತ್, ಸೃಜನ್, ಶ್ರೀಶ, ಗೌತಮ್, ಪ್ರೀತಮ್, ಕೀರ್ತಿ, ಸಾನ್ವಿ, ಶ್ರೀ ಲಕ್ಷ್ಮೀ,ಅಧಿಕಾರ ವಹಿಸಿ ಕೊಂಡರು.

ಈ ಪದ ಪ್ರಧಾನ ಕಾರ್ಯಕ್ರಮ ದ ವೇದಿಕೆಯಲ್ಲಿ ರೋಟರಿ ಕ್ಲಬ್ ಬಾರಕೂರು ನ ಕಾರ್ಯದರ್ಶಿ ರೋ. ಅಜಿತ್ ಕುಮಾರ್ ಶೆಟ್ಟಿ, ಬ್ರಹ್ಮಾವರ ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ರಾದ ರೋ ಅಲ್ವಿನ್ ಅಂದ್ರದೆ, ಶಾಲೆಯ ಮುಖ್ಯಸ್ಥ ರಾದ ಶ್ರೀಮತಿ ಲಿಖಿತಾ ಕೊಠಾರಿ, ಇಂಟರಾಕ್ಟ್ ಕ್ಲಬ್ ನ ಕೋ ಆರ್ಡಿ ನೇಟರ ಶ್ರೀಮತಿ ಸುಜಾತಾ.ಎಲ್. ರೈ, ರೋಟರಿಕ್ಲಬ್ ಬಾರಕೂರ ನ ಇಂಟರಾಕ್ಟ್ ನ ಕೋ ಆರ್ಡಿನೇಟರ್ ರೋ. ಭಾಸ್ಕರ ಪೂಜಾರಿ, ರೋಟರಿಕ್ಲಬ್ ಬಾರಕೂರು ನ ಮಾಜಿ ಅಧ್ಯಕ್ಷರಾದ ರೋ. ಸೀತಾರಾಮ್, ರೋ ಸುಬ್ರಮಣ್ಯ, ರೋ ಜಯಾನಂದ ಪೂಜಾರಿ, 2023ರ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷ ರಾದ ಕು. ಅನಿಷಾ, ಕಾರ್ಯದರ್ಶಿ ಕು. ಅಂಡ್ರಿಯ ರವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆ ಕಾರ್ಯಕ್ರಮ ನೆಡೆಸಿ, ಬಹುಮಾನ ವಿತರಿಸಿದರು.ಈ ಕಾರ್ಯಕ್ರಮ ವನ್ನು ರೋ ರತ್ನಾಕರ ಶೆಟ್ಟಿ ನಿರೂಪಿಸಿ, ಕಾರ್ಯದರ್ಶಿ ರೋ. ಅಜಿತ್ ಕುಮಾರ್ ಶೆಟ್ಟಿ ರವರು ವಂದಿಸಿದರು