ಡೈಲಿ ವಾರ್ತೆ: 06/ಆಗಸ್ಟ್/2024

ಆ.9 ಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ‌ ಸಿದ್ಧತೆ – 2 ಲಕ್ಷ‌ ಜನ ಸೇರಿಸುವ ಗುರಿ!

ಬೆಂಗಳೂರು: ಆಗಸ್ಟ್ 9 ಕ್ಕೆ ಮೈಸೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ‌ 2 ಲಕ್ಷ‌ ಜನ ಸೇರಿಸುವ ಗುರಿ ಹೊಂದಲಾಗಿದೆ ಎನ್ನಲಾಗುತ್ತಿದೆ.

ಬಿಜೆಪಿ ಮೈಸೂರು ಪಾದಯಾತ್ರೆ ಮೈಸೂರು ತಲುಪುವ ದಿನವೇ ಮೈಸೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಯಲಿದೆ.

ಸಿ‌ಎಂ ತವರು ಮೈಸೂರಿನಲ್ಲಿ ಭಾರಿ ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಿದ್ಧತೆ ನಡೆಸಿದೆ ಎನ್ನಲಾಗಿದೆ. 2 ಲಕ್ಷಕ್ಕೂ ಹೆಚ್ಚಿನ ಜನ ಸೇರಿಸುವಂತೆ ಸ್ಥಳೀಯ ನಾಯಕರು ಹಾಗೂ ಶಾಸಕರಿಗೆ ಸಂದೇಶ ರವಾನಿಸಲಾಗಿದೆ ಎನ್ನಲಾಗುತ್ತಿದೆ.

6 ಜಿಲ್ಲೆಗಳಲ್ಲಿ ಪ್ರತಿ ಹಳ್ಳಿಗೆ ತಲಾ 2 ಬಸ್ಸಿನಲ್ಲಿ ಜನ ಕರೆತರಲು ಸಹ ಸೂಚನೆ‌‌ ನೀಡಲಾಗಿದೆ. ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ರಾಮನಗರ ಜಿಲ್ಲೆಯ ಪ್ರತಿ ಹಳ್ಳಿಗೆ 2 ಬಸ್ಸು ಕಳುಹಿಸಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ‌.

ಭಾರಿ ಸಂಖ್ಯೆಯಲ್ಲಿ ಜನರನ್ನ ಸೇರಿಸಿ ಸಿಎಂ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ‌ ನಡೆಯುತ್ತಿದೆ.
ಕನಿಷ್ಟ 2 ಲಕ್ಷ ಜನ ಸೇರಿಸಿ ಸಿದ್ದರಾಮಯ್ಯ ಪರ ಶಕ್ತಿ ಪ್ರದರ್ಶನ ಮಾಡಲು 6 ಜಿಲ್ಲೆಯ ನಾಯಕರಿಗೆ ವಿಶೇಷ ಟಾಸ್ಕ್ ನೀಡಲಾಗಿದೆ. ಅಷ್ಟು ಜಿಲ್ಲೆಯ ನಾಯಕರ ಜೊತೆ ಯತೀಂದ್ರ ಸಿದ್ದರಾಮಯ್ಯ ಮಾತುಕತೆ‌‌ ನಡೆಸುತ್ತಿದ್ದು, ಶತಾಯಗತಾಯ ದೊಡ್ಡಮಟ್ಟದ ಶಕ್ತಿ ಪ್ರದರ್ಶನಕ್ಕೆ ಭರ್ಜರಿ ತಯಾರಿ ‘ಕೈ’ ಪಡೆ ನಡೆಸುತ್ತಿದೆ ಎನ್ನಲಾಗಿದೆ.