ಡೈಲಿ ವಾರ್ತೆ: 11/ಆಗಸ್ಟ್/2024

ನೂತನ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಮತ್ಸೋದ್ಯಮಿ ಆನಂದ ಸಿ. ಕುಂದರ್ ನೇತೃತ್ವದಲ್ಲಿ ಟ್ರಾಲ್ ಬೋಟ್ 370 ತಾಂಡೇಲರ ಸಂಘ ರಿ. ಕೋಟ,ಕೋಡಿ ಹಾಗೂ ಬೀಜಾಡಿ ವಲಯದ ಮೀನುಗಾರರ ಮುಖಂಡರಿಂದ ಸನ್ಮಾನ ಹಾಗೂ ಬಂದರು ಅಭಿವೃದ್ಧಿಗೆ ಮನವಿ.

ಕೋಟ: ಟ್ರಾಲ್ ಬೋಟ್ 370 ತಾಂಡೇಲರ ಸಂಘ ರಿ.
ಕೋಟ, ಕೋಡಿ ಹಾಗೂ ಬೀಜಾಡಿ ವಲಯದ ಮೀನುಗಾರ ಪ್ರಮುಖರು ಮತ್ತು ಬೋಟ್ ಮಾಲಕರುಗಳು ವತಿಯಿಂದ ಮತ್ಸೋದ್ಯಮಿ ಆನಂದ ಸಿ. ಕುಂದರ್ ನೇತೃತ್ವದಲ್ಲಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಅಭಿನಂದನೆ ಹಾಗೂ ಗೌರವ ಸನ್ಮಾನ ಮಾಡಲಾಯಿತು.

ಈ ವೇಳೆ ಮಾನ್ಯ ಸಂಸದರಿಗೆ ಹಂಗಾರಕಟ್ಟೆ ಹಾಗೂ ಕೋಡಿ ಕನ್ಯಾಣ ಬಂದರು ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಕೃಷ್ಣ ಕುಂದರ್, ಹಾಗೂ ಸ್ಥಾಪಕ ಅಧ್ಯಕ್ಷ ಗಣೇಶ್ ಕುಂದರ್, ರಾಜೇಂದ್ರ ಸುವರ್ಣ, ಕೋಟ ಸಿ.ಎ ಬ್ಯಾಂಕ್ ಅಧ್ಯಕ್ಷ ಕೃಷ್ಣ ಕಾಂಚನ್, ಕೋಟತಟ್ಟು ಗ್ರಾಮ ಪಂಚಾಯತಿ ಸದಸ್ಯ ರವೀಂದ್ರ ತಿಂಗಳಾಯ, ಶ್ರೀನಿವಾಸ ತಿಂಗಳಾಯ, ಬಸವ ಕುಂದರ್, ಸಿದ್ಧಿ ಶ್ರೀನಿವಾಸ ಪೂಜಾರಿ, ನಾಗೇಶ್ ಮೆಂಡನ್, ಗೋಪಾಲ ಪೂಜಾರಿ, ರಾಜು ಅಮೀನ್, ದಿನೇಶ್ ಶ್ರೀಯಾನ್, ಗಣೇಶ್ ತಿಂಗಳಾಯ, ಅರುಣ್ ಮೆಂಡನ್, ಚಂದ್ರ ಶ್ರೀನಿಧಿ, ಸತೀಶ್ ಮೆಂಡನ್, ಪ್ರಭಾಕರ ತಿಂಗಳಾಯ, ರಾಜೇಶ್ ಕೋಟ್ಯಾನ್, ಪ್ರಕಾಶ್ ತಿಂಗಳಾಯ, ಉದಯ್ ಕೋಟ್ಯಾನ್, ಸತೀಶ್ ಪೂಜಾರಿ, ರಮೇಶ್ ಕರ್ಕೇರ, ಚಂದ್ರ, ಮಹೇಶ್ ಕುಂದರ್, ಮಂಜುನಾಥ, ಕೇಶವ ಕೊರವಡಿ, ಸತೀಶ್ ಕಾಂಚನ್, ಸಂತೋಷ್ ಕುಂದರ್, ಸುರೇಶ್ ಪೂಜಾರಿ, ಸುರೇಶ್ ತಿಂಗಳಾಯ, ಶಂಕರ್ ಶ್ರೀ ಸಿದ್ಧಿ, ಶಶಿ, ಸುರೇಂದ್ರ ಕನ್ಯಾನ, ನಾಗರಾಜ್ ಭಗವತಿ, ಗಣೇಶ್ ಕೋಟ, ಮಂಜುನಾಥ ಛಾಯ ಲಕ್ಷ್ಮಿ,ಗಣೇಶ್ ಮುದ್ದು ಕೃಷ್ಣ , ಮಂಜುನಾಥ ಗೋಪಾಡಿ ಹಾಗು ಪ್ರಮುಖ ಮೀನುಗಾರ ಮುಖಂಡರು ಉಪಸ್ಥಿತರಿದ್ದರು.