ಡೈಲಿ ವಾರ್ತೆ: 11/ಆಗಸ್ಟ್/2024

ಕೋಟತಟ್ಟು ಭಗವತ್ ಭಜನಾ ಮಂದಿರದ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರಿಂದ ನೂತನ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಸನ್ಮಾನ

ಕೋಟ: ಕೋಟತಟ್ಟು ಪಡುಕರೆ ಭಗವತ್ ಭಜನಾ ಮಂದಿರದಲ್ಲಿ ನೂತನ ಸಂಸದರಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಊರಿನವರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಊರಿನವರು ನನ್ನ ಮೇಲೆ ಇಟ್ಟ ಪ್ರೀತಿ ವಿಶ್ವಾಸಕ್ಕೆ ನಾನು ಆಭಾರಿಯಾಗಿದ್ದೇನೆ.
ನಿಮ್ಮ ವಿಶ್ವಾಸಕ್ಕೆ ದಕ್ಕೆ ಬಾರದಂತೆ ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮಾನಂದ ಮೆಂಡನ್, ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಐರೋಡಿ ವಿಠ್ಠಲ ಪೂಜಾರಿ, ಪಂಚಾಯತ್ ಸದಸ್ಯರಾದ ಪ್ರಮೋದ್ ಹಂದೆ, ವಾಸು ಪೂಜಾರಿ, ರವೀಂದ್ರ ತಿಂಗಳಾಯ, ವಿದ್ಯಾ ಸಾಲ್ಯಾನ್, ಗುರಿಕಾರರಾದ ರಾಮ ಬಂಗೇರ, ರಾಜು ಕುಂದರ್, ವಾಸು ನಾಯ್ಕ್, ಲಕ್ಷಣ ಶ್ರೀಯಾನ್, ಸುರೇಶ್ ಪೂಜಾರಿ, ವಾಸು ಕೆ ನಾಯ್ಕ್, ನಾಗೇಶ್ ಕುಂದರ್, ಸಿದ್ಧಿ ಶ್ರೀನಿವಾಸ್ ಪೂಜಾರಿ, ಮಹಾಬಲ ತಿಂಗಳಾಯ, ರಘು ತಿಂಗಳಾಯ, ಸುದೀನ ಕೋಡಿ, ಸುರೇಶ್ ಪೂಜಾರಿ ಪಾಂಡೇಶ್ವರ, ಶರತ್ ಬಂಗೇರ, ರಜತ್ ಸುವರ್ಣ,ಸ್ವಸ್ತಿಕ್ ಸುವರ್ಣ, ಸುದರ್ಶನ್, ರಾಕೇಶ್, ಸೌಜನ್, ಪ್ರಮೋದ್, ರಾಮ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.