ಡೈಲಿ ವಾರ್ತೆ: 15/ಆಗಸ್ಟ್/2024

ಕಾಪು : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಧ್ವಜಾರೋಹಣ ಕಾರ್ಯಕ್ರಮ.

ಉಚ್ಚಿಲ ಗ್ರಾಮ ಪಂಚಾಯತ್ ಸಮಿತಿ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಜರಗಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದಂತ ಎಸ್ ಡಿಪಿಐ ಗ್ರಾಮ ಸಮಿತಿ ಅಧ್ಯಕ್ಷರಾದ ಹಮೀದ್ ಏನ್ ಚ್ ರವರು ಹಾಗೂ ಮುಖ್ಯ ಅತಿಥಿಗಳು 78 ನೇ ಧ್ವಜಾರೋಹಣ ಕಾರ್ಯಕ್ರಮ ವನ್ನು ನೆರವೇರಿಸಿದರು.
ದೇಶದ ಸ್ವಾತಂತ್ರಕ್ಕಾಗಿ ಮುಸ್ಲಿಮರು ಅಪಾರ ಕೊಡುಗೆಯನ್ನು ನೀಡಿದವರಾಗಿದ್ದಾರೆ . ನಾವು ಸ್ವಾತಂತ್ರದ ಕಾವಾಲುಗಳಾಗ ಬೇಕೆಂದು ಎಸ್ ಡಿಪಿಐ ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಹನೀಫ್ ಮುಳೂರು ರವರು ಮುಖ್ಯ ಭಾಷಣ ಮಾಡಿದರು.


ಈ ಸಂದರ್ಭದಲ್ಲಿ ಎಸ್ ಡಿಪಿಐ
ಜಿಲ್ಲಾ ಕಾರ್ಯದರ್ಶಿಯಾದ ಮಜೀದ್ ಪೊಲ್ಯ, ಎಸ್ ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಜಾಕ್ ವೈ ಎಸ್, ಜಿಲ್ಲಾ ಸಮಿತಿ ಸದಸ್ಯರಾದ ಇಬ್ರಾಹಿಂ ಅರ್ಶ್, ಉಚ್ಚಿಲ ಗ್ರಾಮ ಪಂಚಾಯತ್ ಸದಸ್ಯರಾದ ಆಸೀಫ್ ವೈ ಸಿ, ಇಬ್ರಾಹಿಂ ಕಲ್ಚಲರ್ ಮಸೀದಿ ಇದರ ಅಧ್ಯಕ್ಷ ರಾದ ಇಸ್ಮಾಯಿಲ್,
ಹನಫ್ ಮಸೀದಿ ಇದರ ಮಾಜಿ ಅಧ್ಯಕ್ಷ ರಾದ ಇಬ್ರಾಹಿಂ, ಎಸ್ ಡಿಟಿಯು ಇದರ ಪ್ರಧಾನ ಕಾರ್ಯದರ್ಶಿ ಯಾದ ಖಲೀಲ್ ಉಚ್ಚಿಲ, ಗಣ್ಯವ್ಯಕ್ತಿಗಳು ಸಾರ್ವಜನಿಕರು ಉಪಸ್ಥಿತರಿದ್ದರು
ಇವತ್ತಿನ ಕಾರ್ಯಕ್ರಮದ ನಿರೂಪಣೆಯನ್ನು ನವಾಜ್ ಉಚ್ಚಿಲ ನೆರವೇರಿಸಿದರು