ಡೈಲಿ ವಾರ್ತೆ: 16/ಆಗಸ್ಟ್/2024

ಕಾಲುವೆ ಬಳಿ ನೀರು ಕುಡಿಯಲು ಹೋದ ವೇಳೆ ವಿದ್ಯುತ್ ಪ್ರವಹಿಸಿ ಎಮ್ಮೆ ಸಾವು!

ಗಂಗಾವತಿ: ಕಾಲುವೆ ಬಳಿ ನೀರು ಕುಡಿಯಲು ತೆರಳಿದ ಎಮ್ಮೆಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟ ಘಟನೆ ತಾಲೂಕಿನ ವಿರುಪಾಪುರ ಗಡ್ಡಿ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ.

ರಾಘವೇಂದ್ರ ಕಾಲೋನಿಯ ಲಿಂಗಾರೆಡ್ಡಿ ಎಂಬುವ ಕೃಷಿ ಕಾರ್ಮಿಕರಿಗೆ ಸೇರಿದ್ದ ಹೆಮ್ಮೆ ನೀರು ಕುಡಿಯಲು ಕಾಲುವೆ ಹತ್ತಿರ ತೆರಳಿದ ಸಂದರ್ಭದಲ್ಲಿ ವಿದ್ಯುತ್ ಕಂಬದಿಂದ ವಿದ್ಯುತ್ ಪ್ರವಹಿಸಿ ಎಮ್ಮೆ ಮೃತಪಟ್ಟಿದೆ.

ಸ್ಥಳಕ್ಕೆ ಗ್ರಾಪಂ ಸದಸ್ಯ ರಘುವರ್ಮ ಭೇಟಿ ನೀಡಿ ಪಶು ಸಂಗೋಪನ ಇಲಾಖೆ ವೈದ್ಯರು ಮತ್ತು ಗ್ರಾಮ ಪಿಡಿಓ ಅವರಿಗೆ ಮಾಹಿತಿ ನೀಡಿದ್ದಾರೆ.