ಡೈಲಿ ವಾರ್ತೆ: 17/ಆಗಸ್ಟ್/2024

ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ವತಿಯಿಂದ ಮುಖ್ಯ ಮಂತ್ರಿ ಪದಕ ಪುರಸ್ಕೃತರಾದ ಸಬ್ ಇನ್ಸ್ಪೆಕ್ಟರ್ ಮಧು ಬಿ.ಇ ಅವರಿಗೆ ಸನ್ಮಾನ


ಕೋಟ: ಪ್ರಶಾಂತ್ ಪಡುಕರೆ ಮುಂದಾಳತ್ವದಲ್ಲಿ 2022 ರಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಸನ್ನಿಧಿ ಟ್ರೋಫಿ” ಆಯೋಜನೆ ಮಾಡಿದ ತಂಡ ಜೈ ಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಇವರ ವತಿಯಿಂದ 2023 ರ ಮುಖ್ಯ ಮಂತ್ರಿ ಪದಕ ಪುರಸ್ಕೃತರಾದ ಮಧು ಬಿ ಇ ಸಬ್ ಇನ್ಸ್ಪೆಕ್ಟರ್ ಬ್ರಹ್ಮಾವರ ಇವರನ್ನು ಅವರ ನಿವಾಸದಲ್ಲಿ ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಶ್ರೀಕಾಂತ್ ಶೈಣೆ ಕೋಟ, ದೇವಪ್ಪ ಕಾಂಚನ, ನಾಗರಾಜ್ ಆಚಾರ್ ಕೋಟ ಹಾಗೂ ಬಿಜು ನಾಯರ್ ಹಾಗೂ ಜೈ ಹಿಂದ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಒಳಗೊಂಡಿದ್ದರು. ಸದ್ಯದಲ್ಲೇ ಪಡುಕರೆ ಕಾಲೇಜು ಗ್ರೌಂಡ್ ನಲ್ಲಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ “ಸನ್ನಿಧಿ ಟ್ರೋಫಿ ” ದಿನಾಂಕವನ್ನು ತಿಳಿಸಲಿದ್ದೇವೆ ಎಂದು ಜೈ ಹಿಂದ್ ಸದಸ್ಯರು ತಿಳಿಸಿರುತ್ತಾರೆ