ಡೈಲಿ ವಾರ್ತೆ: 17/ಆಗಸ್ಟ್/2024

ಉಡುಪಿ: ಹೂಡೆ ಸಮುದ್ರದ ಅಲೆಗಳ ಅಬ್ಬರಕ್ಕೆ ಕೊಚ್ಚಿ ಹೋದ ಪ್ರವಾಸಿಗ – ಸ್ಥಳೀಯರಿಂದ ರಕ್ಷಣೆ!

ಉಡುಪಿ: ಉಡುಪಿ ಸಮೀಪದ ಹೂಡೆ ಬಳಿಯ ಕಡಲ ತೀರದಲ್ಲಿ ನೋಡ ನೋಡುತ್ತಲೇ ಪ್ರವಾಸಿಗನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿದ್ದು ಆತನನ್ನು ರಕ್ಷಣೆ ಮಾಡಿದ ಘಟನೆ ಆ. 17 ರಂದು ಶನಿವಾರ ಸಂಭವಿಸಿದೆ.

ದೂರದ ಊರಿನಿಂದ ಉಡುಪಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗ ,ಮೋಜು ಮಸ್ತಿಗಾಗಿ ಹೂಡೆ ಸಮುದ್ರ ತೀರದಲ್ಲಿ ಈಜಾಟವಾಡುತ್ತಿದ್ದ. ಈ ವೇಳೆ ಕಡಲಿನ ಅಬ್ಬರದ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದಲ್ಲಿ ತೇಲಿ ಹೋಗಿದ್ದಾನೆ.

ಸಮುದ್ರದಲ್ಲಿ ಮುಳುಗಿ ಏಳುತ್ತಿದ್ದ ಪ್ರವಾಸಿಗನ ರಕ್ಷಣೆಗೆ ಸ್ಥಳೀಯರಾದ ಹರ್ಷ ಕುಂದರ್ ಮತ್ತು ಗಣೇಶ್ ಕುಂದರ್ ಧಾವಿಸಿ ರಕ್ಷಣೆ ಮಾಡಿದರು.
ಪ್ರಾಣದ ಹಂಗು ತೊರೆದು ಸಮುದ್ರಕ್ಕೆ ಇಳಿದು ಪ್ರವಾಸಿಗನ ಪ್ರಾಣ ಉಳಿಸಿದ ಯುವಕರ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.