ಡೈಲಿ ವಾರ್ತೆ: 21/ಆಗಸ್ಟ್/2024

Skpa ಕುಂದಾಪುರ, ಬೈಂದೂರು ವಲಯ ಛಾಯಾಗ್ರಾಹಕರ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಹಿರಿಯ ಛಾಯಾಗ್ರಾಹಕರಿಗೆ ಸನ್ಮಾನ

Skpa ಕುಂದಾಪುರ,ಬೈಂದೂರು ವಲಯ ಛಾಯಾಗ್ರಾಹಕ ಸಂಘದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಕುಂದಾಪುರ ಛಾಯಾಗ್ರಾಹಕರ ಸೊಸೈಟಿಯ ಸಭಾಂಗಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಉದಯ ಶಂಕರ್ ಪಡಿಯಾರ್ ಹಾಗೂ ಹಿರಿಯ ಛಾಯಾಗ್ರಾಹಕರಾದ ವಿನ್ಸೆಂಟ್ ಡಿಸೋಜ ಇವರನ್ನು ಸನ್ಮಾನಿಸಲಾಯಿತು.

ದಿವಾಕರ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು,
ಗಿರೀಶ್ ಜಿ.ಕೆ. ಅಧ್ಯಕ್ಷರು ಛಾಯಾಗ್ರಾಹಕರ ವಿವಿದೊದ್ದೇಶ ಸಹಕಾರಿ ಸಂಘ ಕುಂದಾಪುರ,ನಾಗರಾಜ ರಾಯಪ್ಪನ‌ ಮಠ ಅಧ್ಯಕ್ಷರು ಕಾರ್ಯನಿರತ ಪತ್ರಕರ್ತರ ಸಂಘ ಕುಂದಾಪುರ, ದಿನೇಶ್ ಗೋಡೆ ಅಧ್ಯಕ್ಷರು ಸಲಹಾ ಸಮಿತಿ ಹಾಗೂ ದಿನೇಶ್ ರಾಯಪ್ಪನ‌ ಮಠ ಪ್ರಧಾನ ಕಾರ್ಯದರ್ಶಿ ಮೊದಲಾದವರು ಉಪಸ್ಥಿತರಿದ್ದರು.

ದಿನೇಶ್ ಗೋಡೆ ಪ್ರಾರ್ಥಿಸಿದರು,ಪ್ರಮೋದ್ ಚಂದನ್ ಪ್ರಾಸ್ತಾವಿಕ ಮಾತನಾಡಿದರು,ದಿವಾಕರ ಶೆಟ್ಟಿ ಸ್ವಾಗತಿಸಿದರು,ರಾಘ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.