ಡೈಲಿ ವಾರ್ತೆ: 26/ಆಗಸ್ಟ್/2024

ಕಟಪಾಡಿ: ರವಿ ಕಟಪಾಡಿ ಈ ಬಾರಿ ಅವತಾರ್ 2 ವೇಷಧಾರಿಯಾಗಿ ಬಡ ಅಶಕ್ತ ಮಕ್ಕಳ ಪಾಲಿಗೆ ವರವಾಗಲಿದ್ದಾರೆ.

ಈ ಬಾರಿ ಮೂರು ಅಶಕ್ತ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯ ಮಾಡಲಿದ್ದು, ಮಂಗಳವಾರ ಉಡುಪಿಯಾದ್ಯಂತ ಸಂಚರಿಸಿ ಹಣ ಸಂಗ್ರಹಿಸಲಿದ್ದಾರೆ.

ಇದುವರೆಗೆ 9 ವರ್ಷದಲ್ಲಿ 130 ಮಕ್ಕಳಿಗೆ 1ಕೋಟಿ 28ಲಕ್ಷ ರೂ.ವೈದ್ಯಕೀಯ ಸಹಾಯ ಹಸ್ತ ನೀಡಿ ವೆಚ್ಚ ಭರಿಸಿದ್ದರು.
ಮಟ್ಟು ದಿನೇಶ್ ಇವರ ಅವತಾರಕ್ಕೆ ಬಣ್ಣ ಬಳಿದಿದ್ದು ಮನಮೋಹಕ ವೇಷ ಜನ ಮನ ಸೆಳೆಯುತ್ತಿದೆ.