ಡೈಲಿ ವಾರ್ತೆ: 27/ಆಗಸ್ಟ್/2024

ಕಾರ್ಕಳ ಅತ್ಯಾಚಾರ ಪ್ರಕರಣ: ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಮುಖಂಡ ನಾಗೇಂದ್ರ ಪುತ್ರನ್ ಖಂಡನೆ

ಕೋಟ: ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣವನ್ನು ರಾಜಕೀಯ ಬಣ್ಣ ಹಚ್ಚುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

ಯಾರೋ ಒಬ್ಬ ಸಮಾಜ ಘಾತುಕ ವ್ಯಕ್ತಿಗಳಿಂದ ಇಂತಹ ಕೃತ್ಯಾವೆಸಗಿ ಅತ್ಯಾಚಾರ ಮಾಡಿದ ಮಾತ್ರಕ್ಕೆ ಈ ಬಿಜೆಪಿಯವರು ಕಾಂಗ್ರೆಸ್ ನಾಯಕರೇ ಅತ್ಯಾಚಾರ ಮಾಡಿದಂತೆ ಸರಕಾರದ ವಿರುದ್ದ ಮಾತನಾಡುತ್ತಾರೆ.
ಪ್ರಜ್ವಲ್ ರೇವಣ್ಣ ನಿರಂತರ ಅತ್ಯಾಚಾರ ಹಾಗೂ ಅನಾಚಾರ ಮಾಡಿ ಜೈಲಿಗೆ ಹೋಗಿದ್ದು ಮೈತ್ರಿ ಪಕ್ಷದ ಬಿಜೆಪಿಯರವರಿಗೆ ಇನ್ನು ತಿಳಿದಿಲ್ಲವೆ?

ಮೊನ್ನೆ ಕಾರ್ಕಳದಲ್ಲಿ ನಡೆದ ಯುವತಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಅಭಯ್ ಎನ್ನುವವನು ಅಲ್ತಾಫ್ ಹಾಗೂ ರಿಚಾರ್ಡ್ ಜೋವಿಯರ್ ಎಂಬುವವರಿಗೆ ಮಾದಕ ವಸ್ತು ನೀಡಿದ್ದು ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳು ತನಿಖೆಯಲ್ಲಿ ಕಂಡುಬಂದಿದೆ.

ಹಾಗಾಗಿ ಅತ್ಯಾಚಾರ ಮಾಡುವವರು ಕಾಂಗ್ರೆಸ್, ಬಿಜೆಪಿ ಎಂದು ಗುರುತಿಸದೆ, ಯಾರೇ ತಪ್ಪಿತಸ್ಥರು ಆಗಿರಲಿ, ಯಾವುದೇ ಪಕ್ಷದ ಕಾರ್ಯಕರ್ತರಾಗಿರಲಿ ಅಥವಾ ಪದಾಧಿಕಾರಿಗಳಾಗಿರಲಿ ಅವರು
ತಪ್ಪಿತಸ್ಥರೇ ಎಂಬುದನ್ನು ಗಮನಿಸಬೇಕು.

ಆದ್ದರಿಂದ ಈ ಪ್ರಕರಣದಲ್ಲಿ ಅಧಿಕಾರಿಗಳು ನ್ಯಾಯಯುತವಾದ ತನಿಖೆ ಮಾಡಿ ಆರೋಪಿಗಳ ಕೃತ್ಯವನ್ನು ಸಾಬೀತುಪಡಿಸಬೇಕು ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರ ಪ್ರತಿಕ್ರಿಯಿಸಿ ಬಿಜೆಪಿಯರ ಹೇಳಿಕೆಯನ್ನು ಖಂಡಿಸಿದ್ದಾರೆ.