ಡೈಲಿ ವಾರ್ತೆ: 01/Sep/2024

ಮೆಸ್ಕಾಂ ಹುಣ್ಸೆಮಕ್ಕಿ ತೆಕ್ಕಟ್ಟೆಯಲ್ಲಿ ಶಾಖಾ ಕಚೇರಿ ತೆರೆಯಲು ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಮನವಿ

ಕೋಟ: ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ತೆಕ್ಕಟ್ಟೆ ಮತ್ತು ಹುಣ್ಸೆಮಕ್ಕಿಯಲ್ಲಿ ಗ್ರಾಹಕರ ಸೇವೆಗೆ ಅನುಕೂಲ ವಾಗಲು ಮೆಸ್ಕಾಂ ಶಾಖಾ ಕಚೇರಿ ತೆರೆಯುವಂತೆ ಇಂಧನ ಸಚಿವರು ಸೂಚಿಸಿದ್ದಾರೆ.

ಕುಂದಾಪುರ ತಾಲ್ಲೂಕಿನ ಮೊಳಹಳ್ಳಿ, ಯಡಾಡಿ-ಮತ್ಯಾಡಿ, ಹೊಂಬಾಡಿ-ಮಂಡಾಡಿ, ಜಪ್ತಿ ಮತ್ತು ಕೂರ್ಗಿ ಸುತ್ತ-ಮುತ್ತಲಿನ ಗ್ರಾಮಗಳಿಗೆ ಸಂಬಂಧಿಸಿದ ಮೆಸ್ಕಾಮ ಶಾಖಾ ಕಛೇರಿಯು ಕುಂದಾಪುರದಲ್ಲಿದ್ದು, ಸಾರ್ವಜನಿಕರಿಗೆ ಶಾಖಾ ಕಛೇರಿಯನ್ನು ಸಂಪರ್ಕಿಸಿ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲು ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಕುಂದಾಪುರ ವಿಭಾಗದಲ್ಲಿನ ,ಹುಣ್ಣೆಮಕ್ಕಿ-ತೆಕ್ಕಟ್ಟೆಯಲ್ಲಿ ನೂತನ ಶಾಖಾ ಕಛೇರಿ ತೆರೆಯಲು ಮಂಜೂರಾತಿ ನೀಡುವ ಕುರಿತು ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ ಅರ್ಜಿಯನ್ನು ನೀಡಿದ್ದರು.
ಇದಕ್ಕೆ ಸ್ಪಂದಿಸಿದ ಕರ್ನಾಟಕ ಸರ್ಕಾರದ ಇಂಧನ ಸಚಿವರು ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಕೋರಿಕೆಯನ್ನು ಪರಿಶೀಲಿಸಿ, ನಿಯಮಾನುಸಾರ ಮುಂದಿನ ಅಗತ್ಯ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ದಿನೇಶ್ ಅವರು ತಿಳಿಸಿದ್ದಾರೆ.